Webdunia - Bharat's app for daily news and videos

Install App

ಸರ್ಕಾರಕ್ಕೆ ಮೊರೆ ಇಟ್ಟರೂ ಕನ್ನಡ ಕಿರುತೆರೆ ಕಲಾವಿದರ ಅಳಲು ನಿಂತಿಲ್ಲ

Webdunia
ಸೋಮವಾರ, 20 ಜುಲೈ 2020 (09:31 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಕನ್ನಡ ಧಾರವಾಹಿಗಳು ಒಂದೊಂದಾಗಿ ನಿಂತು ಇದ್ದಕ್ಕಿದ್ದಂತೆ ಡಬ್ಬಿಂಗ್ ಧಾರವಾಹಿಗಳ ಪ್ರಸಾರ ಆರಂಭವಾದಾಗ ಕನ್ನಡ ಕಲಾವಿದರು, ತಂತ್ರಜ್ಞರು ಗಾಬರಿ ಬಿದ್ದುಹೋದರು. ತುತ್ತಿನ ಚೀಲಕ್ಕೆ ಏಟು ಬಿದ್ದಾಗ ಸರ್ಕಾರದ ಕದ ತಟ್ಟಿದರು.


ಈಗಾಗಲೇ ಕನ್ನಡ ಕಲಾವಿದರು ಒಟ್ಟಾಗಿ ಸಭೆ ನಡೆಸಿ ಸಚಿವ ಆರ್ ಅಶೋಕ್ ಮೂಲಕ ರಾಜ್ಯ ಸರ್ಕಾರಕ್ಕೆ ಡಬ್ಬಿಂಗ್ ಧಾರವಾಹಿಗಳ ಮೇಲೆ ನಿರ್ಬಂಧ ವಿಧಿಸಲು ಮನವಿ ಮಾಡಲಾಗಿತ್ತು.

ಹಾಗಿದ್ದರೂ ಕನ್ನಡ ಕಿರುತೆರೆ ವಾಹಿನಿಗಳು ಡಬ್ಬಿಂಗ್ ಧಾರವಾಹಿಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿಲ್ಲ. ವಿಶೇಷವೆಂದರೆ ಮತ್ತಷ್ಟು ಧಾರವಾಹಿಗಳು ಬೇರೆ ಭಾಷೆಯಿಂದ ಕನ್ನಡಕ್ಕೆ ಬರುತ್ತಲೇ ಇರುತ್ತವೆ. ಇದರಿಂದಾಗಿ ಕನ್ನಡ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಭವಿಷ್ಯದ ಬಗ್ಗೆ ಭಯ ಶುರುವಾಗಿದೆ. ಆದರೆ ಈ ಬಗ್ಗೆ ಯಾವುದನ್ನೂ ಬಾಯಿಬಿಟ್ಟು ಹೇಳಲೂ ಆಗದೇ ಬಿಡಲೂ ಆಗದೇ ಒದ್ದಾಡುತ್ತಿದ್ದಾರೆ. ಈ ವಾರ ಮತ್ತಷ್ಟು ಧಾರವಾಹಿಗಳು ಕನ್ನಡಕ್ಕೆ ಎಂಟ್ರಿ ಕೊಟ್ಟಿವೆ. ಹೀಗೇ ಆದರೆ ಕನ್ನಡ ಕಿರುತೆರೆ ಕಲಾವಿದರ ಬದುಕು ಬೀದಿಗೆ ಬೀಳುವುದು ಖಂಡಿತಾ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments