Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮೋದ್ಯಮಕ್ಕೆ ಭಾರತ ಬಂಧ್ ಬಿಸಿ ಇಲ್ಲ

ಕನ್ನಡ ಸಿನಿಮೋದ್ಯಮಕ್ಕೆ  ಭಾರತ ಬಂಧ್ ಬಿಸಿ ಇಲ್ಲ
Bangalore , ಸೋಮವಾರ, 28 ನವೆಂಬರ್ 2016 (08:53 IST)
ಬೆಂಗಳೂರು: ಕೇಂದ್ರ ಸರ್ಕಾರ ನೋಟು ನಿಷೇಧ ವಿರೋಧಿಸಿ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂಧ್ ಗೆ ಕನ್ನಡ ಚಿತ್ರೋದ್ಯಮದ ಬೆಂಬಲವಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಹೇಳಿದ್ದಾರೆ.

ಸಿನಿಮಾ ಮಂದಿರಗಳಲ್ಲಿ ಎಂದಿನಂತೆ ಚಿತ್ರ ಪ್ರದರ್ಶನಗೊಳ್ಳಲಿದೆ. ನಿಗದಿಯಾಗಿರುವ ಶೂಟಿಂಗ್ ನಡೆಯಲಿದೆ. ಇನ್ನಿತರ  ಯಾವುದೇ ಸಿನಿಮಾ ಚಟುವಟಿಕೆಗಳು ಸಹಜವಾಗಿ ನಡೆಯಲಿದೆ ಎಂದು ಸಾ ರಾ ಗೋವಿಂದು ತಿಳಿಸಿದ್ದಾರೆ.

ನೋಟು ನಿಷೇಧದಿಂದಾಗಿ ಚಿತ್ರರಂಗಕ್ಕೂ ಬಿಸಿ ತಟ್ಟಿದೆ. ಜನ ಸಿನಿಮಾ ವೀಕ್ಷಣೆಗೆ ಥಿಯೇಟರ್ ಗೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಹಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಕ್ರಮವನ್ನು ಬೆಂಬಲಿಸಲು ಚಿತ್ರೋದ್ಯಮ ನಿರ್ಧರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿಯ ಎರಡನೇ ಹಾಡು ಬೆಳಗಾಗೆದ್ದು ಸೂಪರ್ ಹಿಟ್!