Select Your Language

Notifications

webdunia
webdunia
webdunia
webdunia

ನಟ ರಮೇಶ್ ಅರವಿಂದ್ ಗೆ ಪಿತೃ ವಿಯೋಗ

ನಟ ರಮೇಶ್ ಅರವಿಂದ್ ಗೆ ಪಿತೃ ವಿಯೋಗ
Bangalore , ಗುರುವಾರ, 10 ನವೆಂಬರ್ 2016 (08:56 IST)
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಗೆ ಪಿತೃ ವಿಯೋಗವಾಗಿದೆ. ಮಂಗಳವಾರ ಅವರ ತಂದೆ ಗೋವಿಂದಾಚಾರಿ ತೀರಿಕೊಂಡಿದ್ದಾರೆ.

ಈ ವಿಷಯವನ್ನು ಸ್ವತಃ ರಮೇಶ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಅಕೌಂಟೆಂಟ್ ಆಗಿದ್ದ ರಮೇಶ್ ತಂದೆ ನಂತರ ಕೈಗಾರಿಕೋದ್ಯಮಿಯಾದರು. ಸಾಯುವ ಮೊದಲು ದೇಹದಾನ ಮಾಡಬೇಕೆಂಬುದು ಅವರ ಇಚ್ಛೆಯಾಗಿತ್ತಂತೆ.

ಅದರಂತೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದ್ದು, ದೇಹವನ್ನು ದಾನ ಮಾಡಲಾಗಿದೆ ಎಂದಿದ್ದಾರೆ. ತಮ್ಮ ತಂದೆ ತಮಗೆ ರೋಲ್ ಮಾಡೆಲ್ ಆಗಿದ್ದರು ಎಂದು ರಮೇಶ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ತಿ ಗುಡಿ ದುರಂತ: ಅನಿಲ್ ಮೃತದೇಹವೂ ಪತ್ತೆ