Select Your Language

Notifications

webdunia
webdunia
webdunia
webdunia

ಮಾಸ್ತಿ ಗುಡಿ ದುರಂತ: ಅನಿಲ್ ಮೃತದೇಹವೂ ಪತ್ತೆ

ಮಾಸ್ತಿ ಗುಡಿ ದುರಂತ: ಅನಿಲ್ ಮೃತದೇಹವೂ ಪತ್ತೆ
Bangalore , ಗುರುವಾರ, 10 ನವೆಂಬರ್ 2016 (07:46 IST)
ಬೆಂಗಳೂರು: ಮಾಸ್ತಿ ಗುಡಿ ಕ್ಲೈಮಾಕ್ಸ್ ಶೂಟಿಂಗ್ ವೇಳೆ ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಅನಿಲ್ ಮೃತದೇಹವೂ ಪತ್ತೆಯಾಗಿದೆ.

ನಿನ್ನೆಯಷ್ಟೇ ಇಬ್ಬರು ಖಳನಟರ ಪೈಕಿ ಉದಯ್ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಅನಿಲ್ ಮೃತದೇಹ ಸಿಕ್ಕಿರಲಿಲ್ಲ. ಮತ್ತೆ ಕಾರ್ಯಾಚರಣೆ ಮುಂದುವರಿಸಿದ ಸಿಬ್ಬಂದಿ ಇಂದು ಬೆಳಗಿನ ಜಾವ 5.50 ರ ಸುಮಾರಿಗೆ ಅನಿಲ್ ಮೃತದೇಹವನ್ನೂ ಪತ್ತೆ ಮಾಡಿತ್ತು.

ಉದಯ್ ಮೃತದೇಹ ಸಿಕ್ಕ ಕೆಲವೇ ಮೀಟರ್ ದೂರದಲ್ಲಿ ಅನಿಲ್ ಮೃತದೇಹ ತೇಲುತ್ತಿತ್ತು ಎಂದು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎನ್ ಡಿ ಆರ್ ಎಫ್ ಸಿಬ್ಬಂದಿ ಹೇಳಿದ್ದಾರೆ. ಕೆರೆಯ ಪಕ್ಕದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು.

ಈ ವೇಳೆ ನಟ ದುನಿಯಾ ವಿಜಯ್ ಕೂಡಾ ಉಪಸ್ಥಿತರಿದ್ದರು. ಇದೇ ವೇಳೆ ನಿನ್ನೆ ಸಿಕ್ಕಿದ ಉದಯ್ ಮೃತದೇಹದ ಅಂತಿಮ ದರ್ಶನಕ್ಕೆ ಇಂದು 9 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದ್ದು, ನಂತರ ಬನಶಂಕರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯ ಮುಂದಿನ ಕೆಲಸ ನೋಡುತ್ತೇವೆ: ದುನಿಯಾ ವಿಜಿ