Select Your Language

Notifications

webdunia
webdunia
webdunia
webdunia

ಪ್ರೇಮ ಕವಿ ಕೆ. ಕಲ್ಯಾಣ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ

ಪ್ರೇಮ ಕವಿ ಕೆ. ಕಲ್ಯಾಣ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ
ಬೆಂಗಳೂರು , ಸೋಮವಾರ, 5 ಅಕ್ಟೋಬರ್ 2020 (09:26 IST)
ಬೆಂಗಳೂರು: ಪ್ರೇಮಕವಿ ಎಂದೇ ಖ್ಯಾತರಾಗಿರುವ ಚಿತ್ರಸಾಹಿತಿ ಕೆ.ಕಲ್ಯಾಣ್ ವೈವಾಹಿಕ ಬದುಕು ಮುರಿದು ಬೀಳುವ ಹಂತದಲ್ಲಿದೆ. ಕಲ್ಯಾಣ್ ವಿರುದ್ಧ ಆರೋಪ ಮಾಡಿರುವ ಪತ್ನಿ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ.

 

2005 ರಲ್ಲಿ ಕಲ್ಯಾಣ್-ಅಶ್ವಿನಿ ಮದುವೆಯಾಗಿದ್ದರು. ಇದೀಗ ತನ್ನ ಗಂಡ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಅಶ್ವಿನಿ ಬೆಳಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈಯಕ್ತಿಕ ಸಮಸ್ಯೆಯಿಂದಾಗಿ ಕಳೆದ ಆರು ತಿಂಗಳಿನಿಂದ ಈ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ನಡು ರಾತ್ರಿ ಮನೆಗೆ ಬಂದು ಗಲಾಟೆ ಮಾಡಿದ್ದಾರೆ, ನನ್ನ ಪೋಷಕರಿಂದ ಕಲ್ಯಾಣ್ ಲಕ್ಷಾಂತರ ರೂಪಾಯಿ ಪಡೆದಿದ್ದಾರೆ. ನಮ್ಮ ಪೋಷಕರ ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ ಎಂಬಿತ್ಯಾದಿ ಆರೋಪ ಮಾಡಿದ್ದಾರೆ.

ಆದರೆ ಇದನ್ನು ನಿರಾಕರಿಸಿರುವ ಕಲ್ಯಾಣ್ ನನ್ನ ಪತ್ನಿಗೆ ಪರಿಚಿತರೇ ಮಾಟ ಮಂತ್ರ ಮಾಡಿ ಹೀಗೆಲ್ಲಾ ಮಾಡಿಸಿದ್ದಾರೆ. ನಾವಿಬ್ಬರೂ ಕೂತು ಮಾತನಾಡಿದರೆ ಸಮಸ್ಯೆ ಬಗೆಹರಿಯಬಹುದು. ಇಷ್ಟು ದಿವಸ ಇಲ್ಲದ ಸಮಸ್ಯೆಗಳು ಈಗ ಇದ್ದಕ್ಕಿದ್ದಂತೆ ಎಲ್ಲಿಂದ ಉದ್ಭವಿಸಿತು? ನಾನು ಅವರ ಪೋಷಕರ ಹಣದ ಮೇಲೆ ಕಣ್ಣಿಟ್ಟಿದ್ದರೆ ಯಾವತ್ತೋ ಅದನ್ನು ಪಡೆಯಬಹುದಿತ್ತು. ಯಾರೋ ಆಕೆಯ ಕೈಯಲ್ಲಿ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಪ್ರಭುಗೆ ಕೊರೊನಾ ಸೋಂಕು ತಗುಲಿದೆಯಾ?