Webdunia - Bharat's app for daily news and videos

Install App

ರಾವಣ ಪಾತ್ರಕ್ಕೆ ಕತ್ತರಿ: ನಟ ಜೆಕೆ ಬಹಿರಂಗ ಅಸಮಾಧಾನ

Webdunia
ಶನಿವಾರ, 17 ಅಕ್ಟೋಬರ್ 2020 (09:20 IST)
ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಯಾ ಕೆ ರಾಮ್ ಹಿಂದ ಧಾರವಾಹಿ ಕನ್ನಡ ಅವತರಣಿಕೆ ಸೀತೆಯ ರಾಮ ಧಾರವಾಹಿಯಲ್ಲಿ ರಾವಣನ ಪಾತ್ರಕ್ಕೆ ಕತ್ತರಿ ಹಾಕಿರುವುದು ನಟ ಜೆಕೆ ಬೇಸರಕ್ಕೆ ಕಾರಣವಾಗಿದೆ.


ಹಿಂದಿಯಲ್ಲಿ ರಾವಣ ಪಾತ್ರ ಮಾಡಿದ್ದ ಜೆಕೆಗೆ ಕನ್ನಡದಲ್ಲಿ ಅದೇ ಧಾರವಾಹಿಯ ಡಬ್ಬಿಂಗ್ ಅವತರಣಿಕೆಯಲ್ಲಿ ಕತ್ತರಿ ಪ್ರಯೋಗ ಮಾಡಿರುವುದು ಬೇಸರಕ್ಕೆ ಕಾರಣವಾಗಿದೆ. ತಮಿಳು, ಒಡಿಯಾ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲೂ ರಾವಣ ಪಾತ್ರವನ್ನು ಯಾವುದೇ ಎಡಿಂಗ್ ಮಾಡದೇ ಇದ್ದ ಹಾಗೆಯೇ ತೋರಿಸಲಾಗಿದೆ. ಆದರೆ ಕನ್ನಡಿಗನಾಗಿ ಕನ್ನಡದಲ್ಲೇ ತಮ್ಮ ಪಾತ್ರವನ್ನು ಕಟ್ ಮಾಡಿರುವುದು ಯಾಕೆ? ಕನ್ನಡ ಭಾಷಾಭಿಮಾನದ ಬಗ್ಗೆ ಎಲ್ಲರೂ ಭಾಷಣ ಮಾಡುತ್ತಾರೆ. ಆದರೆ ಕನ್ನಡಿಗ ಬೇರೆ ಭಾಷೆಯಲ್ಲಿ ಮಿಂಚಿದರೂ ನಮ್ಮ ಕನ್ನಡದಲ್ಲೇ ಪ್ರೋತ್ಸಾಹ ಕೊಡಲ್ಲ ಎಂದು ಜೆಕೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ. ಅಲ್ಲದೆ,  ‘ಅವರ ಕಂಡ್ರೆ ಇವರಿಗೆ ಆಗಲ್ಲ, ಇವರನ್ ಕಂಡ್ರೆ ಅವರಿಗೆ ಆಗಲ್ಲ, ಒಟ್ನಲ್ಲಿ ನೀವು ಯಾರೂ ಉದ್ದಾರ ಆಗಲ್ಲ. ಕನ್ನಡ ಬೆಳೆಸಿ, ಕನ್ನಡ ಉಳಿಸಿ ಅಂತಾರೆ, ಆದರೆ ರಿಯಲ್ ಕನ್ನಡಿಗನ ಇಲ್ಲಿ ತುಳಿತಾರೆ’ ಎಂದು ಬೇಸರದಿಂದಲೇ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments