Select Your Language

Notifications

webdunia
webdunia
webdunia
webdunia

ಜನ ನಾಯಗನ್ ಸೆನ್ಸಾರ್‌ ಪ್ರಮಾಣಪತ್ರ: ನಟ ವಿಜಯ್‌ಗೆ ಬಿಗ್‌ಶಾಕ್‌

Vijay Dalapathy
ತಮಿಳುನಾಡು: ಜನ ನಾಯಗನ್ ಚಿತ್ರ ನಿರ್ಮಾಪಕರ ಸಿಬಿಎಫ್‌ಸಿ ಕ್ಲಿಯರೆನ್ಸ್ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೈಕೋರ್ಟ್ ವಿಭಾಗೀಯ ಪೀಠವು ಈ ವಿಷಯವನ್ನು ಪರಿಗಣಿಸುತ್ತಿರುವಾಗ ತನ್ನ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನಟ - ರಾಜಕಾರಣಿ ವಿಜಯ್ ನಟಿಸಿದ ತಮಿಳು ಚಲನಚಿತ್ರ "ಜನ ನಾಯಗನ್" ನಿರ್ಮಾಪಕರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ  ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ಜನವರಿ 15 ವಜಾಗೊಳಿಸಿದೆ.

ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಜನವರಿ 20ರಂದು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠವು ಈ ವಿಷಯವನ್ನು ವಿಚಾರಣೆ ನಡೆಸಲಿದೆ ಎಂದು ತಿಳಿಸಿ ಈ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿತು.

ಸಿನಿಮಾವನ್ನು ತಕ್ಷಣವೇ ಪ್ರಮಾಣೀಕರಿಸುವಂತೆ ಸಿಬಿಎಫ್‌ಸಿಗೆ ಏಕ ಪೀಠ ನೀಡಿದ ನಿರ್ದೇಶನವನ್ನು ತಡೆಹಿಡಿದ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಚಿತ್ರದ ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ ಅರ್ಜಿ ಸಲ್ಲಿಸಿದೆ.

ಕೆವಿಎನ್ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಸಿಬಿಎಫ್‌ಸಿ ಅನುಮತಿ ನೀಡುವ ಮೊದಲು ಬಿಡುಗಡೆ ದಿನಾಂಕವನ್ನು ಘೋಷಿಸುವುದು ದೀರ್ಘಕಾಲದಿಂದ ಇತ್ಯರ್ಥಗೊಂಡ ಉದ್ಯಮ ಪದ್ಧತಿಯಾಗಿದೆ ಎಂದು ವಾದಿಸಿದರು. 5000 ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಬುಕ್ ಮಾಡಲಾಗಿದೆ ಎಂದು ಅವರು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

₹25 ಲಕ್ಷ ವಂಚನೆ ಆರೋಪ: ತಂಗಿ ವಿರುದ್ಧವೇ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕಾರುಣ್ಯಾ ರಾಮ್‌