Webdunia - Bharat's app for daily news and videos

Install App

ರಾಯರ ಪವಾಡದ ಅನುಭವ ವಿವರಿಸಿದ ನವರಸನಾಯಕ ಜಗ್ಗೇಶ್

Webdunia
ಸೋಮವಾರ, 16 ನವೆಂಬರ್ 2020 (11:35 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಗುರು ರಾಘವೇಂದ್ರರ ಪರಮ ಭಕ್ತರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜಗ್ಗೇಶ್ ಈಗ ತಮಗೆ ರಾಯರ ವಿಚಾರದಲ್ಲಿ ಆದ ಪವಾಡ ಸದೃಷ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.


ಒಂದು ದಿನ ಮಡದಿ ನೀಡಿದ ಊಟ ಮುಗಿಸಿ ರಾಯರ ಫೋಟೋ ನೋಡುತ್ತಾ ಭಕ್ತಿಪರವಶನಾಗಿ ಕೂತಿದ್ದೆ. ರಾಯರೇ ನನಗೆ ಜೀವನದಲ್ಲಿ ಇದುವರೆಗೆ ಬೇಡಿದ್ದನ್ನೆಲ್ಲಾ ಕೊಟ್ಟಿದ್ದೀರಿ, ಕೊಡುತ್ತಲೂ ಇದ್ದೀರಿ. ಆದರೆ ಪರಮ ಪಾಪಿಯಾದ ನಾನು ನಿಮ್ಮನ್ನು ಶಾಸ್ತ್ರೋಸ್ತ್ರಕವಾಗಿ ಭಜಿಸುವ ಭಾಗ್ಯ ಪಡೆದಿಲ್ಲ.  ಕಲಿಯುವ ವಯಸ್ಸಲ್ಲಿ ಅಪ್ಪ ಬಿಡಲಿಲ್ಲ. ಅಲ್ಪ ಸ್ವಲ್ಪ ಚಿತ್ರಗೀತೆ ಹಾಡುವೆ. ದಯಮಾಡಿ ನಿಮ್ಮ ಮುಂದೆ ಕೂತು ಹಾಡಲು ಆಶೀರ್ವದಿಸಿ ಎಂದು ಬೇಡಿಕೊಂಡೆ. ಮಿಂಚಿನಂತೆ ಮಂತ್ರಾಯಲದಿಂದ ಪಿಆರ್ ಒ ನರಸಿಂಹಾಚಾರ್ ರಿಂದ ವಿಡಿಯೋ ಕಾಲ್ ಬಂತು. ಸಾಕ್ಷಾತ್ ಬೃಂದಾವನದ ದರ್ಶನವಾಯಿತು. ಅಳು ತಡೆಯಲಾಗಲಿಲ್ಲ. ಮನಬಿಚ್ಚಿ ರಾಯರಿಗೆ ಧನ್ಯವಾದ ಹೇಳಿದೆ. ಈ ಸರಿಹೊತ್ತಿನಲ್ಲಿ ರಾಯರ ಬೃಂದಾವನ ದರ್ಶನ ಮಾಡಲು ನನಗೆ ಮಾಡಿಸಲು ಏನು ಪ್ರೇರಣೆಯಾಯಿತು ಎಂದು ಕೇಳಿದೆ. ಬೃಂದಾವನ ಅಲಂಕಾರ ತೆಗೆಯಬೇಕಾದರೆ ಅಲ್ಲೇ ನಿಂತಿದ್ದೆ. ಇದ್ದಕ್ಕಿದ್ದಂತೆ ಜಗ್ಗೇಶನಿಗೆ ರಾಯರ ಬೃಂದಾವನ ತೋರಿಸುವಂತೆ ಪ್ರೇರಣೆಯಾಯಿತು ಎಂದರು. ಕೋಟಿ ಬಾರಿ ನಮಿಸಿ ಹೇಳುವೆ, ರಾಯರು ತಾಯಂತೆ, ಮಕ್ಕಳು ಬಯಸಿದಾಗ ಬಂದು ಬಿಡುವರು’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments