Webdunia - Bharat's app for daily news and videos

Install App

ರಾಯರ ಪವಾಡದ ಅನುಭವ ವಿವರಿಸಿದ ನವರಸನಾಯಕ ಜಗ್ಗೇಶ್

Webdunia
ಸೋಮವಾರ, 16 ನವೆಂಬರ್ 2020 (11:35 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಗುರು ರಾಘವೇಂದ್ರರ ಪರಮ ಭಕ್ತರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜಗ್ಗೇಶ್ ಈಗ ತಮಗೆ ರಾಯರ ವಿಚಾರದಲ್ಲಿ ಆದ ಪವಾಡ ಸದೃಷ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.


ಒಂದು ದಿನ ಮಡದಿ ನೀಡಿದ ಊಟ ಮುಗಿಸಿ ರಾಯರ ಫೋಟೋ ನೋಡುತ್ತಾ ಭಕ್ತಿಪರವಶನಾಗಿ ಕೂತಿದ್ದೆ. ರಾಯರೇ ನನಗೆ ಜೀವನದಲ್ಲಿ ಇದುವರೆಗೆ ಬೇಡಿದ್ದನ್ನೆಲ್ಲಾ ಕೊಟ್ಟಿದ್ದೀರಿ, ಕೊಡುತ್ತಲೂ ಇದ್ದೀರಿ. ಆದರೆ ಪರಮ ಪಾಪಿಯಾದ ನಾನು ನಿಮ್ಮನ್ನು ಶಾಸ್ತ್ರೋಸ್ತ್ರಕವಾಗಿ ಭಜಿಸುವ ಭಾಗ್ಯ ಪಡೆದಿಲ್ಲ.  ಕಲಿಯುವ ವಯಸ್ಸಲ್ಲಿ ಅಪ್ಪ ಬಿಡಲಿಲ್ಲ. ಅಲ್ಪ ಸ್ವಲ್ಪ ಚಿತ್ರಗೀತೆ ಹಾಡುವೆ. ದಯಮಾಡಿ ನಿಮ್ಮ ಮುಂದೆ ಕೂತು ಹಾಡಲು ಆಶೀರ್ವದಿಸಿ ಎಂದು ಬೇಡಿಕೊಂಡೆ. ಮಿಂಚಿನಂತೆ ಮಂತ್ರಾಯಲದಿಂದ ಪಿಆರ್ ಒ ನರಸಿಂಹಾಚಾರ್ ರಿಂದ ವಿಡಿಯೋ ಕಾಲ್ ಬಂತು. ಸಾಕ್ಷಾತ್ ಬೃಂದಾವನದ ದರ್ಶನವಾಯಿತು. ಅಳು ತಡೆಯಲಾಗಲಿಲ್ಲ. ಮನಬಿಚ್ಚಿ ರಾಯರಿಗೆ ಧನ್ಯವಾದ ಹೇಳಿದೆ. ಈ ಸರಿಹೊತ್ತಿನಲ್ಲಿ ರಾಯರ ಬೃಂದಾವನ ದರ್ಶನ ಮಾಡಲು ನನಗೆ ಮಾಡಿಸಲು ಏನು ಪ್ರೇರಣೆಯಾಯಿತು ಎಂದು ಕೇಳಿದೆ. ಬೃಂದಾವನ ಅಲಂಕಾರ ತೆಗೆಯಬೇಕಾದರೆ ಅಲ್ಲೇ ನಿಂತಿದ್ದೆ. ಇದ್ದಕ್ಕಿದ್ದಂತೆ ಜಗ್ಗೇಶನಿಗೆ ರಾಯರ ಬೃಂದಾವನ ತೋರಿಸುವಂತೆ ಪ್ರೇರಣೆಯಾಯಿತು ಎಂದರು. ಕೋಟಿ ಬಾರಿ ನಮಿಸಿ ಹೇಳುವೆ, ರಾಯರು ತಾಯಂತೆ, ಮಕ್ಕಳು ಬಯಸಿದಾಗ ಬಂದು ಬಿಡುವರು’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments