Webdunia - Bharat's app for daily news and videos

Install App

ದೂರವಾಗಿದ್ದ ಜಗ್ಗೇಶ್-ಮಠ ಗುರುಪ್ರಸಾದ್ ಮತ್ತೆ ಜತೆಯಾದ್ರು

Webdunia
ಗುರುವಾರ, 19 ಸೆಪ್ಟಂಬರ್ 2019 (09:18 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಗೆ ಬ್ರೇಕ್ ಕೊಟ್ಟ ಸಿನಿಮಾ ಎಂದರೆ ಮಠ. ಈ ಸಿನಿಮಾ ನಂತರ ನಿರ್ದೇಶಕ ಗುರುಪ್ರಸಾದ್ ಜತೆಗೆ ಜಗ್ಗೇಶ್ ಎದ್ದೇಳು ಮಂಜುನಾಥ ಸಿನಿಮಾ ಮಾಡಿಯೂ ಹಿಟ್ ಆದರು.


ಆದರೆ ಆ ಎರಡು ಹಿಟ್ ಸಿನಿಮಾಗಳ ಬಳಿಕ ಈ ಜೋಡಿ ಯಾಕೋ ಮನಸ್ತಾಪ ಮಾಡಿಕೊಂಡು ದೂರ ದೂರವಾಯಿತು. ಇದೀಗ ಮತ್ತೆ ಇಬ್ಬರೂ ಒಂದಾಗುತ್ತಿದ್ದಾರೆ.

ಜಗ್ಗೇಶ್ ಮತ್ತೆ ಮಠ ನಿರ್ದೇಶಕ ಗುರುಪ್ರಸಾದ್ ಜತೆಗಿನ ವೈಮನಸ್ಯ ಮರೆತು ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ವಿಚಾರವನ್ನು ಸ್ವತಃ ಜಗ್ಗೇಶ್ ಪ್ರಕಟಿಸಿದ್ದಾರೆ. 10 ವರ್ಷವಾಯಿತು ನಮ್ಮಿಬ್ಬರ ಜತೆಯಾಟವಾಗಿ. ನಾನಾ ಕಾರಣಕ್ಕೆ ನಾವಿಬ್ಬರೂ ಇಷ್ಟು ವರ್ಷ ಸೇರಲಾಗಲಿಲ್ಲ. ಗುರುಪ್ರಸಾದ್ ನೀವು ಹುಂ ಅಂದರೆ ಮತ್ತೊಮ್ಮೆ ನಮ್ಮಿಬ್ಬರ ಜೋಡಿ ಕರ್ನಾಟಕ ನಗಿಸುವ ಎಂದ. ನಾನು ಹುಂ  ಅಂದೆ. ಮಜ್ಜಿಗೆಯಲ್ಲಿನ ಬೆಣ್ಣೆಯಂತೆ ಕಡೆಯಲು ಹೋಗಿದ್ದಾನೆ ಕತೆ. ನಮ್ಮಿಬ್ಬರ ಜೋಡಿಗೆ ನಿಮ್ಮ ಲೈಕ್ಸ್ ಎಷ್ಟಿದೆ ನೋಡೋಣ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಈ ಮೂಲಕ ಈ ಹಿಟ್ ಜೋಡಿ ಮತ್ತೊಂದು ರಸವತ್ತಾದ ಸಿನಿಮಾ ಮಾಡಲು ಹೊರಟಿದೆ. ಮೂಲಗಳ ಪ್ರಕಾರ ನವಂಬರ್ ನಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ನಾನು ಪ್ರೀತಿಸುವ ಕನ್ನಡಿಗರ ಬಗ್ಗೆ ಹೀಗೆಲ್ಲಾ ಯಾಕೆ ಹೇಳಲಿ: ಮತ್ತೆ ಗರಂ ಆದ ಸೋನು ನಿಗಂ

Madenur Manu: ಒಬ್ಬರು ಲೇಡಿ ಡಾನ್, ಇಬ್ಬರು ಹೀರೋಗಳು ನನ್ನನ್ನು ಸಿಕ್ಕಿ ಹಾಕಿಸಿದ್ದಾರೆ: ಮಡೆನೂರು ಮನು

Cannes 2025: ಹಣೆಗೆ ಸಿಂಧೂರವಿಟ್ಟು ಲುಕ್‌ನಲ್ಲೇ ಪಾಕ್‌ಗೆ ದಿಟ್ಟ ಉತ್ತರಕೊಟ್ಟ ಕರಾವಳಿ ಬೆಡಗಿ ಐಶ್ವರ್ಯಾ ರೈ

Rape Case: ನಾಳೆ ಸಿನಿಮಾ ರೀಲಿಸ್ ಖುಷಿಯಲ್ಲಿದ್ದ ನಟ ಮಡೆನೂರು ಮನು ಅರೆಸ್ಟ್‌

ಅಬ್ದುಲ್‌ ಕಲಾಂ ಪಾತ್ರಕ್ಕೆ ಜೀವತುಂಬಲಿದ್ದಾರೆ ಧನುಷ್‌: ತೆರೆ ಮೇಲೆ ಬರಲಿದೆ ಮಿಸೈಲ್ ಮ್ಯಾನ್ ಕಹಾನಿ

ಮುಂದಿನ ಸುದ್ದಿ
Show comments