Webdunia - Bharat's app for daily news and videos

Install App

ಕಾಮಿಡಿ ಕಿಲಾಡಿಗಳು ನಯನಾ ಕನ್ನಡ ವಿವಾದ: ನೆರವಿಗೆ ಬಂದ ಜಗ್ಗೇಶ್

Webdunia
ಶನಿವಾರ, 11 ಜುಲೈ 2020 (09:40 IST)
ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿಗೆ ಬಂದ ನಯನಾ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಕಾಮೆಂಟ್ ಒಂದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ನಯನಾ ಪರವಾಗಿ ಜಗ್ಗೇಶ್ ಮಾತನಾಡಿದ್ದಾರೆ.


ನಯನಾ ತಮ್ಮ ಪೋಸ್ಟ್ ಒಂದರಲ್ಲಿ ಇಂಗ್ಲಿಷ್ ನಲ್ಲಿ ಅಡಿಬರಹ ಬರೆದಿದ್ದರು. ಇದನ್ನು ನೋಡಿ ನೆಟ್ಟಿಗರೊಬ್ಬರು ನಿಮಗೆ ಬೆಳೆಯುವವರೆಗೆ ಕನ್ನಡ ಬೇಕು. ಆಮೇಲೆ ಯಾಕೆ ಇಂಗ್ಲಿಷ್ ಬಳಸುತ್ತೀರಿ ಎಂದು ಕೇಳಿದ್ದ. ಇದಕ್ಕೆ ನಯನಾ ಖಾರವಾಗಿ ‘ಅಪ್ಪಾ.. ಕನ್ನಡದ ಭಕ್ತ ಮುಚ್ಕೊಂಡು ಹೋಗಪ್ಪಾ’ ಎಂದು ಕಾಮೆಂಟ್ ಮಾಡಿದ್ದರು.

ಕನ್ನಡದ ಬಗ್ಗೆ ಕೇಳಿದ್ದಕ್ಕೆ ಈ ಮಟ್ಟಿಗೆ ಕಾಮೆಂಟ್ ಮಾಡಬೇಕಾಗಿರಲಿಲ್ಲ ಎಂದು ಹಲವರು ಆಕ್ಷೇಪಿಸಿದ್ದರು. ಈ ವಿವಾದದ ಬಗ್ಗೆ ಮಾತನಾಡಿರುವ ಜಗ್ಗೇಶ್ ‘ಈಕೆ ಇನ್ನೂ ಸೊಸೆ, ಅನುಭವದ ಅತ್ತೆ ಆಗಲು ಸಮಯ ಬೇಕು. ನಮ್ಮ ಕಾಲದಲ್ಲಿ  ದಿನ ಹಾಗೂ ವಾರದ ಪತ್ರಿಕೆಯಲ್ಲಿ ಪ್ರತಿಕ್ರಿಯೆ ಬರುತ್ತಿತ್ತು. ಇಂದು ಅಂಗೈಯಲ್ಲೇ ಅಭಿಪ್ರಾಯ ಕುಟ್ಟುವ ಕೋಟ್ಯಂತರ ಪತ್ರಕರ್ತರಿದ್ದಾರೆ. ಹಾಗಾಗಿ ಎಚ್ಚರವಾಗಿ ಉತ್ತರಿಸಬೇಕು. ಇಲ್ಲದಿದ್ದರೆ ಗಮನಿಸದೆ ಮುಂದೆ ಹೋಗಬೇಕು. ಅನ್ಯರಿಗೆ ಉತ್ತರಿಸಿ ಕೂತರೆ ನಮ್ಮ ಗುರಿ ಶೂನ್ಯ. ಸಮಯ ವ್ಯರ್ಥ’ ಎಂದು ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments