Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣದಿಂದ ನಷ್ಟ ಆರೋಪಕ್ಕೆ ಜಾಕ್ ಮಂಜು ಸ್ಪಷ್ಟನೆ

ವಿಕ್ರಾಂತ್ ರೋಣದಿಂದ ನಷ್ಟ ಆರೋಪಕ್ಕೆ ಜಾಕ್ ಮಂಜು ಸ್ಪಷ್ಟನೆ
ಬೆಂಗಳೂರು , ಗುರುವಾರ, 13 ಜುಲೈ 2023 (17:39 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿದ್ದ ವಿಕ್ರಾಂತ್ ರೋಣ ಸಿನಿಮಾದಿಂದ ನಿರ್ಮಾಪಕ ಜ್ಯಾಕ್ ಮಂಜುಗೂ ನಷ್ಟವಾಗಿತ್ತು ಎಂದು ಆರೋಪಿಸಿದ್ದ ನಿರ್ಮಾಪಕ ರೆಹಮಾನ್ ಗೆ ಮಂಜು ಸ್ಪಷ್ಟನೆ ನೀಡಿದ್ದಾರೆ.

ಕಿಚ್ಚ ಸುದೀಪ್ ಆಪ್ತರಾಗಿರುವ ಜ್ಯಾಕ್ ಮಂಜು ಇದುವರೆಗೆ ನಿರ್ಮಾಪಕರು ಮತ್ತು ಸುದೀಪ್ ನಡುವಿನ ಮನಸ್ತಾಪದ ಬಗ್ಗೆ ಮಾಧ‍್ಯಮಗಳ ಮುಂದೆ ಸ್ಪಷ್ಟನೆ ನೀಡುತ್ತಲೇ ಇದ್ದಾರೆ. ಇದೀಗ ವಿಕ್ರಾಂತ್ ರೋಣ ಸಿನಿಮಾದಿಂದ ನಷ್ಟವಾಗಿದೆ ಎಂಬ ಆರೋಪಗಳಿಗೂ ಸ್ಪಷ್ಟನೆ ನೀಡಿದ್ದಾರೆ.

‘ನನಗೆ ವಿಕ್ರಾಂತ್ ರೋಣ ಸಿನಿಮಾದಿಂದ ಯಾವುದೇ ನಷ್ಟವಾಗಿಲ್ಲ.  ತನ್ನ ಕೋಟಿಗಟ್ಟಲೆ ಸಂಭಾವನೆ ಪಡೆಯದೇ ಸುದೀಪ್ ನನ್ನ ಕೈ ಹಿಡಿದಿದ್ದಾರೆ. ರೆಹಮಾನ್ ಹೇಳಿಕೆಯಲ್ಲೇ ದ್ವಂದ್ವ ಕಾಣುತ್ತಿದೆ. ಸಾವಿರಾರು ಸಲ ಕರೆ ಮಾಡಿ ನಾನು ಸ್ವೀಕರಿಸಿಲ್ಲ ಎನ್ನುವ ಅವರ ಬಳಿಯೇ ನಾನು ಕರೆ ಮಾಡಿ ವಿಕ್ರಾಂತ್ ರೋಣದಿಂದ ನಷ್ಟವಾಗಿದೆ ಎಂದು ಹೇಳಲು ಸಾಧ‍್ಯವೇ? ಈ ಹೇಳಿಕೆ ಹಾಸ್ಯಾಸ್ಪದ ಎನಿಸುವುದಿಲ್ಲವೇ? ಅಷ್ಟಕ್ಕೂ ಅವರಿಗೆ ಕರೆ ಮಾಡಿ ಹೇಳಲು ನನಗೂ ಅವರಿಗೂ ಇರುವ ಸಂಬಂಧವೇನು? ಇದು ನನ್ನ ಮತ್ತು ಸುದೀಪ್ ನಡುವೆ ತಂದಿಟ್ಟು ದೂರ ಮಾಡುವ ಕುತಂತ್ರ. ರೆಹಮಾನ್ ಮಾಡಿರುವ ಸುಳ್ಳಿನ ಆರೋಪಗಳಲ್ಲಿ ಉತ್ತರ ಕೊಡಲು ಯೋಗ್ಯವಾದ ಪ್ರಶ್ನೆಯಿದ್ದರೆ ಮಾತ್ರ ಸುದೀಪ್ ಅವರೇ ಉತ್ತರಿಸಬಹುದು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜವಾನ್ ಪಾತ್ರ ಮಾಡಲು ಯಶ್ ಸಿನಿಮಾಗಳನ್ನೂ ನೋಡಿದ್ದಾರಂತೆ ಶಾರುಖ್ ಖಾನ್