Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಪುಷ್ಪಾ ಚಿತ್ರದ ಬಗ್ಗೆ ತಯಾರಕರು ಕಾಳಜಿ ವಹಿಸುತ್ತಿಲ್ಲ ಎನ್ನಲಾಗಿದೆ

ಈ ಕಾರಣಕ್ಕೆ ಪುಷ್ಪಾ ಚಿತ್ರದ ಬಗ್ಗೆ ತಯಾರಕರು ಕಾಳಜಿ ವಹಿಸುತ್ತಿಲ್ಲ ಎನ್ನಲಾಗಿದೆ
ಹೈದರಾಬಾದ್ , ಶನಿವಾರ, 19 ಡಿಸೆಂಬರ್ 2020 (13:12 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರವನ್ನು ಹ್ಯಾಟ್ರಿಕ್ ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ಆದರೆ ಈ ಚಿತ್ರದ ಬಗ್ಗೆ ಸರಿಯಾದ ಕಾಳಜಿ ವಹಿಸಲು ತಯಾರಕರು ವಿಫಲರಾಗಿದ್ದಾರೆ ಎನ್ನಲಾಗಿದೆ.

ಪುಷ್ಪಾ ಚಿತ್ರದ ಚಿತ್ರೀಕರಣದ ಕೆಲವೇ ದಿನಗಳಲ್ಲಿ ಹಲವು ಫೋಟೊಗಳು ಸೋರಿಕೆಯಾಗಿದೆ. ಫೋಟೊಗಳು ಮಾತ್ರವಲ್ಲದೇ ಸ್ಥಳದ ವಿಡಿಯೋಗಳೂ ಸಹ ಹೊರಬಂದಿವೆ. ಈ ನಡುವೆ ಇತ್ತೀಚಿನ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಕೆಲವು ಅಲ್ಲು ಅರ್ಜುನ್ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಈ ಚಿತ್ರದ ಬಗ್ಗೆ ಇನ್ನು ಮುಂದೆ  ನಿರ್ದೇಶಕರು ಮತ್ತು ನಿರ್ಮಾಪಕರು ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸ್ಟಾರ್ ನಟನ ಜೊತೆ ನಟಿಸಲು ಆಸಕ್ತಿ ಇಲ್ಲ ಎಂದ ನಟಿ ವಿಜಯಶಾಂತಿ