Select Your Language

Notifications

webdunia
webdunia
webdunia
webdunia

ರವಿಚಂದ್ರನ್ ರವರ ಸೂಚನೆ ಮೇರೆಗೆ ಸೀಜರ್ ಚಿತ್ರದ ಡೈಲಾಗ್ ಗೆ ಕತ್ತರಿ ಹಾಕಿದ ನಿರ್ದೇಶಕ

ರವಿಚಂದ್ರನ್ ರವರ ಸೂಚನೆ ಮೇರೆಗೆ ಸೀಜರ್ ಚಿತ್ರದ ಡೈಲಾಗ್ ಗೆ ಕತ್ತರಿ ಹಾಕಿದ ನಿರ್ದೇಶಕ
ಬೆಂಗಳೂರು , ಗುರುವಾರ, 12 ಏಪ್ರಿಲ್ 2018 (14:19 IST)
ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿದ ‘ಸೀಜರ್’ ಚಿತ್ರದ ಡೈಲಾಗ್ ಒಂದರ  ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಇದೀಗ ಚಿತ್ರದಿಂದ ಆ ಡೈಲಾಗ್ ಅನ್ನು ತೆಗೆಯುವ ನಿರ್ಧಾರ ಚಿತ್ರತಂಡ ಮಾಡಿದೆ.


ಹೌದು. ಸೀಜರ್ ಚಿತ್ರದಲ್ಲಿ ರವಿಚಂದ್ರನ್ ಅವರು ಹೇಳಿರುವ ‘ಗೋ ಹತ್ಯೆ ಮಾಡೋದು, ಹೆತ್ತ ತಾಯಿನಾ ತಲೆ ಹಿಡಿಯೋದು ಎರಡೂ ಒಂದೇ' ಎಂಬ ಡೈಲಾಗ್ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ ಪ್ರಕಾಶ್ ರೈ ಅವರು ಕೂಡ ಈ ಡೈಲಾಗ್ ಕುರಿತಾಗಿ ಆಕ್ಷೇಪಣೆ ಮಾಡಿದ್ದು ನಿರ್ದೇಶಕ ವಿನಯ್ ಕೃಷ್ಣ ಅವರಿಗೆ ಬೇಸರವನ್ನುಂಟು ಮಾಡಿದ್ದಲ್ಲದೇ ಆ ಡೈಲಾಗ್ ಅನ್ನು ತೆಗೆದು ಹಾಕುವುದಿಲ್ಲವೆಂದು ಖಡಕ್ ಆಗಿ ಹೇಳಿದ್ದರು. ಆದರೆ ಇದೀಗ ರವಿಚಂದ್ರನ್ ಅವರೇ ಆ ಸಂಭಾಷಣೆ ಕಿತ್ತು ಹಾಕುವಂತೆ ಸೂಚಿಸಿದ್ದಾರೆ. ಇದರಿಂದಾಗಿ ನಿರ್ದೇಶಕರು ಅದನ್ನು ತೆಗೆದುಹಾಕುವ ನಿರ್ಧಾರ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ವಿರೋಧಿಸಿ ಮಾಡಿದ ಪ್ರತಿಭಟನೆಯ ಬಗ್ಗೆ ಕಂಗನಾ ಹೇಳಿದ್ದೇನು…?