Publish Date: Mon, 17 Aug 2026 (10:59 IST)
Updated Date: Mon, 17 Aug 2026 (11:02 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಇಂದು ನಟ ದರ್ಶನ್ ಗೆ ಮಹತ್ವದ ದಿನವಾಗಿದೆ. ಇಂದು ಅವರು ಕೋರ್ಟ್ ಗೆ ಖುದ್ದು ಹಾಜರಾತಿ ವಿಚಾರವಾಗಿ ಕೋರ್ಟ್ ಆದೇಶ ಹೊರಡಿಸಲಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ಪ್ರಗತಿಯಲ್ಲಿದೆ. ಈ ನಡುವೆ ಪ್ರಮುಖ ಸಾಕ್ಷಿ ವಿಚಾರಣೆ ವೇಳೆ ದರ್ಶನ್ ರನ್ನು ಖುದ್ದಾಗಿ ಕೋರ್ಟ್ ಗೆ ಹಾಜರುಪಡಿಸಬೇಕು ಎಂಬುದು ಅವರ ಪರ ವಕೀಲರ ವಾದವಾಗಿದೆ. ಆದರೆ ಇದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪವೆತ್ತಿದ್ದರು.
ಹೀಗಾಗಿ ಎರಡೂ ಕಡೆ ವಾದ ಆಲಿಸಿದ 59 ನೇ ಸಿಸಿಎಚ್ ಕೋರ್ಟ್ ಇಂದು ತೀರ್ಪು ನೀಡುವುದಾಗಿ ಘೋಷಿಸಿತ್ತು. ಇಂದು ದರ್ಶನ್ ಖುದ್ದು ಹಾಜರಾಗಲು ಕೋರ್ಟ್ ಅನುಮತಿ ನೀಡುತ್ತಾ ನೋಡಬೇಕಿದೆ.
ಪ್ರಕರಣದಲ್ಲಿ 19 ನೇ ಸಾಕ್ಷ್ಯ ವಿಚಾರಣೆ ನಡೆಯಬೇಕಿದೆ. ಈ ಸಾಕ್ಷಿಯ ವಿಚಾರಣೆ ವೇಳೆ ಖುದ್ದಾಗಿ ಹಾಜರುಪಡಿಸಿದರೆ ಸಾಕ್ಷ್ಯ ವಿಚಾರಣೆ ವೇಳೆ ಅನುಮಾನಗಳಿದ್ದರೆ ಸ್ಥಳದಲ್ಲೇ ದರ್ಶನ್ ರಿಂದ ಮಾಹಿತಿ ಪಡೆಯಬಹುದು ಎಂಬುದು ಅವರ ಪರ ವಕೀಲರ ವಾದವಾಗಿದೆ. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರೆ ಸಾಕು ಎನ್ನುವುದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದವಾಗಿದೆ. ಅವರನ್ನು ಕೋರ್ಟ್ ಗೆ ಕರೆತಂದರೆ ಅನಗತ್ಯ ಗೊಂದಲಗಳು, ಗದ್ದಲಗಳು, ನೂಕುನುಗ್ಗಲು ಉಂಟಾಗುತ್ತದೆ ಎನ್ನುವುದು ಅವರ ವಾದವಾಗಿದೆ. ಇಂದು ಕೋರ್ಟ್ ನೀಡುವ ಅದೇಶದ ಮೇರೆಗೆ ದರ್ಶನ್ ಖುದ್ದು ಹಾಜರಾಗುತ್ತಾರಾ ಎನ್ನುವುದು ನಿರ್ಧಾರವಾಗಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ