Webdunia - Bharat's app for daily news and videos

Install App

ಜಾಮೀನು ಸಿಕ್ಕ ಸುದ್ದಿ ಕೇಳಿ ಪವಿತ್ರಾ ಗೌಡ ರಿಯಾಕ್ಷನ್ ಹೇಗಿತ್ತು ಗೊತ್ತಾ

Krishnaveni K
ಶುಕ್ರವಾರ, 13 ಡಿಸೆಂಬರ್ 2024 (15:12 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಪವಿತ್ರಾ ಗೌಡಗೆ ಕೊನೆಗೂ ಜಾಮೀನು ಸಿಕ್ಕಿದೆ. ಈ ಸುದ್ದಿ ತಿಳಿಯುತ್ತಿದ್ದಂತೇ ಅವರು ಯಾವ ರೀತಿ ರಿಯಾಕ್ಟ್ ಮಾಡಿದರು ಗೊತ್ತಾ?

ಪವಿತ್ರಾ ಗೌಡ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾರೆ. ಜೂನ್ 11 ರಂದು ದರ್ಶನ್ ಜೊತೆಗೆ ಅವರೂ ಬಂಧಿತರಾಗಿದ್ದರು. 15 ದಿನಗಳ ಪೊಲೀಸ್ ಕಸ್ಟಡಿ ಬಳಿಕ ಪವಿತ್ರಾ ಕೂಡಾ ಇತರೆ ಆರೋಪಿಗಳ ಜೊತೆ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಅದರಂತೆ ಅವರು ಕಳೆದ 6 ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಇದರ ನಡುವೆ ಒಮ್ಮೆ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಇದೀಗ ಕೊನೆಗೂ ಹೈಕೋರ್ಟ್ ಪವಿತ್ರಾ, ದರ್ಶನ್, ಪ್ರದೋಷ್, ನಾಗರಾಜು, ಲಕ್ಷ್ಮಣ್, ಅನುಕುಮಾರ್ ಸೇರಿದಂತೆ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಇದು ಪವಿತ್ರಾ ಹಾಗೂ ದರ್ಶನ್ ಇಬ್ಬರಿಗೂ ನಿರಾಳತೆ ತಂದಿದೆ.

ಜಾಮೀನು ಸಿಕ್ಕ ಸುದ್ದಿ ತಿಳಿದ ತಕ್ಷಣ ಪವಿತ್ರಾ ಸಹ ಖೈದಿಗಳೊಂದಿಗೆ ಕಣ್ಣೀರು ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರಂತೆ. ಕೊನೆಗೂ ಆರು ತಿಂಗಳ ಜೈಲು ವಾಸಕ್ಕೆ ಬ್ರೇಕ್ ಬಿದ್ದಿರುವುದರಿಂದ ತುಂಬಾ ಸಂತೋಷಗೊಂಡರು ಎಂದು ತಿಳಿದುಬಂದಿದೆ. ಈ ಖುಷಿಯನ್ನು ಸಹ ಖೈದಿಗಳೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Mysore Sandal: ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಭಾಟಿಯಾ, ಪಡೆದ ಸಂಭಾವನೆ ಕೇಳಿದ್ರೆ ಶಾಕ್‌

ಸಲ್ಮಾನ್‌ ಖಾನ್‌ರನ್ನು ಭೇಟಿಯಾಗಬೇಕೆಂದು ಮನೆಗೆ ನುಗ್ಗಿದ ಅಭಿಮಾನಿ, ಇದೀಗ ಪೊಲೀಸ್ ಅತಿಥಿ

Sonu Nigam: ನಾನು ಪ್ರೀತಿಸುವ ಕನ್ನಡಿಗರ ಬಗ್ಗೆ ಹೀಗೆಲ್ಲಾ ಯಾಕೆ ಹೇಳಲಿ: ಮತ್ತೆ ಗರಂ ಆದ ಸೋನು ನಿಗಂ

Madenur Manu: ಒಬ್ಬರು ಲೇಡಿ ಡಾನ್, ಇಬ್ಬರು ಹೀರೋಗಳು ನನ್ನನ್ನು ಸಿಕ್ಕಿ ಹಾಕಿಸಿದ್ದಾರೆ: ಮಡೆನೂರು ಮನು

Cannes 2025: ಹಣೆಗೆ ಸಿಂಧೂರವಿಟ್ಟು ಲುಕ್‌ನಲ್ಲೇ ಪಾಕ್‌ಗೆ ದಿಟ್ಟ ಉತ್ತರಕೊಟ್ಟ ಕರಾವಳಿ ಬೆಡಗಿ ಐಶ್ವರ್ಯಾ ರೈ

ಮುಂದಿನ ಸುದ್ದಿ
Show comments