Select Your Language

Notifications

webdunia
webdunia
webdunia
webdunia

ಎಸ್ ಪಿ ಬಿ ಸಾವಿಗೂ ಮೊದಲೇ ಸಿದ್ಧವಾಗಿತ್ತು ಅವರ ಪ್ರತಿಮೆ

ಎಸ್ ಪಿ ಬಿ ಸಾವಿಗೂ ಮೊದಲೇ ಸಿದ್ಧವಾಗಿತ್ತು ಅವರ ಪ್ರತಿಮೆ
ಚೆನ್ನೈ , ಸೋಮವಾರ, 28 ಸೆಪ್ಟಂಬರ್ 2020 (20:53 IST)
ಖ್ಯಾತ ಸಂಗೀತ ಮಾಂತ್ರಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಾವು ಮುನ್ಸೂಚನೆ ಕೊಟ್ಟಿತ್ತಾ?

ಹೀಗೊಂದು ಅನುಮಾನ ಹಾಗೂ ಪ್ರಶ್ನೆ ಇದೀಗ ಅವರ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.

ಏಕೆಂದರೆ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಗಾನ ಗಾರುಡಿಗ ತಮ್ಮ ಮೂರ್ತಿಯನ್ನು ತಯಾರು ಮಾಡುವಂತೆ ಸಾಯುವ ಮೊದಲೇ ತಿಳಿಸಿದ್ದರು ಎಂಬ ವಿಷಯ ಬಹಿರಂಗವಾಗಿದೆ.

ಒಂದು ತಿಂಗಳಿಗೂ ಹೆಚ್ಚು ಕಾಲ ಕೊರೊನಾದೊಂದಿಗೆ ಸೆಣಸಾಡಿ ಚೇತರಿಸಿಕೊಂಡ ಎಸ್ ಪಿ ಬಿ ಶ್ವಾಸಕೋಶದ ವೈರಸ್‌ ಬೀರಿದ ಕೆಟ್ಟ ಪರಿಣಾಮದಿಂದ ಅಗಲಿದರು.
 ಜನಪ್ರಿಯ ಶಿಲ್ಪಿ ರಾಜ್‌ಕುಮಾರ್ ವುಡಾಯರ್ ಅವರ ಪೋಷಕರಿಗೆ ಪ್ರತಿಮೆಗಳನ್ನು ಮಾಡುವಂತೆ ಎಸ್ ಪಿ ಬಿ ಹೇಳಿದ್ದರು.

ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಶಿಲ್ಪಿ ನೆಲೆಸಿದ್ದಾರೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ತಂದೆ ಎಸ್.ಪಿ.ಸಂಬಮೂರ್ತಿ ಅವರು ಹರಿಕಥಾ ಕಲಾವಿದರಾಗಿದ್ದರೆ, ಅವರ ತಾಯಿ ಸಕುಂತಲಮ್ಮ ಗೃಹಿಣಿಯಾಗಿದ್ದರು. ರಾಜ್‌ಕುಮಾರ್ ವುಡಾಯರ್ ಅವರು ಎಸ್‌ಪಿಬಿ ಅವರ ಪ್ರತಿಮೆಯನ್ನೂ ಮಾಡಲು ಹೇಳಿದ್ದು, ಎಸ್ ಪಿ ಬಿಗೆ ಮೂರ್ತಿ ಹಸ್ತಾಂತರಿಸುವ ಮೊದಲೇ ಗಾಯಕ ಅಗಲಿರೋದು ವಿಧಿಯ ವಿಚಿತ್ರ ಆಟ.


Share this Story:

Follow Webdunia kannada

ಮುಂದಿನ ಸುದ್ದಿ

ಭಗತ್ ಸಿಂಗ್ ಜನ್ಮ ದಿನಾಚರಣೆಗೆ ಸೆಲ್ಯೂಟ್ ಮಾಡಿದ ಬಾಲಿವುಡ್ ನಟಿ