Webdunia - Bharat's app for daily news and videos

Install App

ಒಬ್ಬರು ಮಾಡಿದ ತಪ್ಪಿನಿಂದ ಮನೆಯ ಎಲ್ಲರಿಗೂ ಶಿಕ್ಷೆ…!

Webdunia
ಬುಧವಾರ, 1 ನವೆಂಬರ್ 2017 (18:53 IST)
ಬೆಂಗಳೂರು: ಮೂರನೇ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದು, ಇದರ ನಡುವೆಯೂ ಕೆಲವರ ಮುನಿಸು ಇನ್ನೂ ಕಡಿಮೆಯಾಗಿಲ್ಲ.

ಆದರೆ ನಿನ್ನೆ ಒಬ್ಬರು ಮಾಡಿದ ತಪ್ಪಿನಿಂದಾಗಿ ಇಡೀ ಮನೆಯ ಸ್ಪರ್ಧಿಗಳು ಉಪವಾಸದಿಂದ ಇರಬೇಕಾಯಿತು. ತಿಂಡಿಯಾದ ಬಳಿಕ ಬಂದ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸ್ ಲೆಮನ್ ಟೀ ಮಾಡಿಕೊಳ್ಳಲು ಬಂದಿದ್ದರು. ಈ ವೇಳೆ ಗ್ಯಾಸ್ ಆಫ್ ಮಾಡದೆ ಹೋಗಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಮನೆಗೆ ಗ್ಯಾಸ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಮಧ್ಯಾಹ್ನ ಅಡುಗೆ ಮಾಡಲು ಬಂದವರಿಗೆ ಗ್ಯಾಸ್ ಇಲ್ಲದೆ ಪರದಾಡಿದರು. ಗ್ಯಾಸ್ ಸ್ಟೌವ್ ಸಮಸ್ಯೆ ಇರಬಹುದು ಎಂದು ಸಿಹಿಕಹಿ ಚಂದ್ರು ನೋಡಿದರು. ಆದರೆ ಏನೂ ಸಮಸ್ಯೆ ಇರಲಿಲ್ಲ. ಕಡೆಗೆ ಇದು ನಮ್ಮದೇ ತಪ್ಪಿನಿಂದ ಆಗಿರುವ ಸಮಸ್ಯೆ ಎಂದು ಆಶಿತಾ ಹೇಳಿದರು. ಜಯಶ್ರೀನಿವಾಸ್ ಈ ಮೊದಲು ಸ್ಟೌವ್ ಬಳಿಯಿದ್ದರು. ಹೀಗಾಗಿ ಇದು ಅವರ ತಪ್ಪಿನಿಂದಾದ ಶಿಕ್ಷೆ ಎಂದು ಅನುಪಮಾ ಹೇಳಿದರು.

ಕೊನೆಗೆ ಜಯಶ್ರೀನಿವಾಸ್ ಬಿಗ್ ಬಾಸ್ ಗೆ ಕ್ಷಮೆ ಕೋರಿದರು. ಇದರ ನಡುವೆ ಅನುಪಮಾ, ಚಂದ್ರು ಸಹ ಕ್ಷಮೆಕೋರಿದರೂ ಸಹ ಬಿಗ್ ಬಾಸ್ ಮನ್ನಿಸಲಿಲ್ಲ. ಇದರಿಂದ ಕೋಪಗೊಂಡ ಆಶಿತಾ, ಜೆಕೆ, ಕೃಷಿ, ಜಗನ್ ಇದೆಲ್ಲ ಜಯ ಶ್ರೀನಿವಾಸ್ ಮಾಡಿದ ತಪ್ಪು. ಅಡುಗೆ ಮಾಡಲು ಬರದಿದ್ದರೆ ಏಕೆ ಬರಬೇಕ್ಕಿತ್ತು ಎಂದು ಕೆಂಡಾಮಂಡಲವಾದರು. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಶೀತಲ ಸಮರ ಶುರುವಾಗಿದ್ದು, ಇದರ ನಡುವೆಯೇ ಎಲ್ಲರು ಉಪವಾಸದಿಂದ ದಿನಕಳೆದರು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments