Webdunia - Bharat's app for daily news and videos

Install App

ಒಬ್ಬರು ಮಾಡಿದ ತಪ್ಪಿನಿಂದ ಮನೆಯ ಎಲ್ಲರಿಗೂ ಶಿಕ್ಷೆ…!

Webdunia
ಬುಧವಾರ, 1 ನವೆಂಬರ್ 2017 (18:53 IST)
ಬೆಂಗಳೂರು: ಮೂರನೇ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದು, ಇದರ ನಡುವೆಯೂ ಕೆಲವರ ಮುನಿಸು ಇನ್ನೂ ಕಡಿಮೆಯಾಗಿಲ್ಲ.

ಆದರೆ ನಿನ್ನೆ ಒಬ್ಬರು ಮಾಡಿದ ತಪ್ಪಿನಿಂದಾಗಿ ಇಡೀ ಮನೆಯ ಸ್ಪರ್ಧಿಗಳು ಉಪವಾಸದಿಂದ ಇರಬೇಕಾಯಿತು. ತಿಂಡಿಯಾದ ಬಳಿಕ ಬಂದ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸ್ ಲೆಮನ್ ಟೀ ಮಾಡಿಕೊಳ್ಳಲು ಬಂದಿದ್ದರು. ಈ ವೇಳೆ ಗ್ಯಾಸ್ ಆಫ್ ಮಾಡದೆ ಹೋಗಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಮನೆಗೆ ಗ್ಯಾಸ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಮಧ್ಯಾಹ್ನ ಅಡುಗೆ ಮಾಡಲು ಬಂದವರಿಗೆ ಗ್ಯಾಸ್ ಇಲ್ಲದೆ ಪರದಾಡಿದರು. ಗ್ಯಾಸ್ ಸ್ಟೌವ್ ಸಮಸ್ಯೆ ಇರಬಹುದು ಎಂದು ಸಿಹಿಕಹಿ ಚಂದ್ರು ನೋಡಿದರು. ಆದರೆ ಏನೂ ಸಮಸ್ಯೆ ಇರಲಿಲ್ಲ. ಕಡೆಗೆ ಇದು ನಮ್ಮದೇ ತಪ್ಪಿನಿಂದ ಆಗಿರುವ ಸಮಸ್ಯೆ ಎಂದು ಆಶಿತಾ ಹೇಳಿದರು. ಜಯಶ್ರೀನಿವಾಸ್ ಈ ಮೊದಲು ಸ್ಟೌವ್ ಬಳಿಯಿದ್ದರು. ಹೀಗಾಗಿ ಇದು ಅವರ ತಪ್ಪಿನಿಂದಾದ ಶಿಕ್ಷೆ ಎಂದು ಅನುಪಮಾ ಹೇಳಿದರು.

ಕೊನೆಗೆ ಜಯಶ್ರೀನಿವಾಸ್ ಬಿಗ್ ಬಾಸ್ ಗೆ ಕ್ಷಮೆ ಕೋರಿದರು. ಇದರ ನಡುವೆ ಅನುಪಮಾ, ಚಂದ್ರು ಸಹ ಕ್ಷಮೆಕೋರಿದರೂ ಸಹ ಬಿಗ್ ಬಾಸ್ ಮನ್ನಿಸಲಿಲ್ಲ. ಇದರಿಂದ ಕೋಪಗೊಂಡ ಆಶಿತಾ, ಜೆಕೆ, ಕೃಷಿ, ಜಗನ್ ಇದೆಲ್ಲ ಜಯ ಶ್ರೀನಿವಾಸ್ ಮಾಡಿದ ತಪ್ಪು. ಅಡುಗೆ ಮಾಡಲು ಬರದಿದ್ದರೆ ಏಕೆ ಬರಬೇಕ್ಕಿತ್ತು ಎಂದು ಕೆಂಡಾಮಂಡಲವಾದರು. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಶೀತಲ ಸಮರ ಶುರುವಾಗಿದ್ದು, ಇದರ ನಡುವೆಯೇ ಎಲ್ಲರು ಉಪವಾಸದಿಂದ ದಿನಕಳೆದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

IPL 2025 ಸೋಲಿನ ಬಗ್ಗೆ ಕೊನೆಗೂ ಭಾವುಕ ಪೋಸ್ಟ್ ಹಂಚಿಕೊಂಡ ಪಂಜಾಬ್ ಒಡತಿ ಪ್ರೀತಿ ಜಿಂಟಾ

Road Accident: ಕಣ್ಣೆದುರೇ ತಂದೆಯನ್ನು ಕಳೆದುಕೊಂಡ ನಟ ಶೈನ್ ಟಾಮ್ ಚಾಕೊ

Akhil Akkineni Marriage: ಟ್ರೆಂಡಿಂಗ್‌ನಲ್ಲಿದೆ ನಾಗರ್ಜುನ ಮಗನ ಮದುವೆ ಫೋಟೋಗಳು

ಡಿವೋರ್ಸ್ ಬೆನ್ನಲ್ಲೇ ಮತ್ತೇ ಗೆಳತಿ ಜತೆ ಜೋಡಿಯಾಗಿ ಕಾಣಿಸಿಕೊಂಡ ನಟ ಜಯಂ ರವಿ, ಇದು ಅದೇ ಎಂದ ನೆಟ್ಟಿಗರು

Rakshit Shetty Birthday: ಫ್ರೆಂಡ್ ಗೆ ಗುಡ್ ನ್ಯೂಸ್ ಕೊಡಕ್ಕೆ ಹೇಳಿ ರಿಷಭ್ ಶೆಟ್ರೇ...

ಮುಂದಿನ ಸುದ್ದಿ
Show comments