Webdunia - Bharat's app for daily news and videos

Install App

ದರ್ಶನ್ ನೋಡಲು ಜೈಲಿಗೆ ನೋಡಲು ಬಂದ ವಿಶೇಷ ವ್ಯಕ್ತಿಗಳು: ದಾಸನ ಮುಖದಲ್ಲಿ ನಗುವೋ ನಗು

Krishnaveni K
ಗುರುವಾರ, 19 ಸೆಪ್ಟಂಬರ್ 2024 (12:38 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗಬಂಧನದಲ್ಲಿರುವ ನಟ ದರ್ಶನ್ ರನ್ನು ನೋಡಲು ಇಂದು ಬಳ್ಳಾರಿ ಜೈಲಿಗೆ ವಿಶೇಷ ವ್ಯಕ್ತಿಗಳು ಬಂದಿದ್ದಾರೆ. ಅವರನ್ನು ನೋಡಿ ದರ್ಶನ್ ಮುಖದಲ್ಲಿ ನಗುವೋ ನಗು.

ಬಳ್ಳಾರಿ ಜೈಲಿಗೆ ಬಂದ ಮೇಲೆ ದರ್ಶನ್ ಭೇಟಿಗೆ ಬರುವವರ ಸಂಖ್ಯೆ ಸೀಮಿತವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಅನೇಕ ಸಿನಿ ತಾರೆಯರು ಬರುತ್ತಿದ್ದರು. ಆದರೆ ಈಗ ಕುಟುಂಬಸ್ಥರು ಮಾತ್ರ ಬರುತ್ತಿದ್ದಾರೆ. ಮೊನ್ನೆಯಷ್ಟೇ ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಗೌಡ ಜೊತೆಯಾಗಿ ಬಂದು ದರ್ಶನ್ ಗೆ ಡ್ರೈ ಫ್ರೂಟ್ಸ್, ಬಟ್ಟೆ ಕೊಟ್ಟು ಹೋಗಿದ್ದರು.

ಇಂದು ದರ್ಶನ್ ನೋಡಲು ಅವರ ತಾಯಿ ಮೀನಾ ತೂಗುದೀಪ ಮತ್ತು ಅಕ್ಕ, ಅಕ್ಕನ ಮಗ ಆಗಮಿಸಿದ್ದಾರೆ. ಅಮ್ಮನನ್ನು ನೋಡಬೇಕು ಎಂದು ದರ್ಶನ್ ತುಂಬಾ ಆಸೆಪಟ್ಟಿದ್ದರು. ಕಳೆದ ವಾರವೇ ಅಮ್ಮನಿಗಾಗಿ ಹಂಬಲಿಸಿದ್ದರು. ಆದರೆ ಪರಪ್ಪನ ಅಗ್ರಹಾರದಲ್ಲಿದ್ದಾಗಗ ಒಮ್ಮೆ ಬಂದಿದ್ದ ತಾಯಿ ಬಳ್ಳಾರಿ ಜೈಲಿಗೆ ಬಂದಿರಲಿಲ್ಲ.

ಇಂದು ಮೊದಲ ಬಾರಿಗೆ ಸಹೋದರಿ ಕೂಡಾ ದರ್ಶನ್ ಭೇಟಿಗೆ ಬಂದಿದ್ದಾರೆ. ತನ್ನ ತಾಯಿ, ಅಕ್ಕ, ಅಕ್ಕನ ಮಗನನ್ನು ನೋಡುತ್ತಿದ್ದಂತೇ ದರ್ಶನ್ ಮುಖ ಸಂತೋಷದಿಂದ ಅರಳಿತ್ತು. ನಗು ನಗುತ್ತಲೇ ಜೈಲಿನ ಆವರಣದಿಂದ ವಿಸಿಟರ್ಸ್ ಕೊಠಡಿಗೆ ಬಂದಿರುವುದು ಕಂಡುಬಂದಿದೆ. ಆ ಮೂಲಕ ದರ್ಶನ್ ಅಮ್ಮನ ನೋಡುವ ಆಸೆ ಕೊನೆಗೂ ಈಡೇರಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ಮುಂದಿನ ಸುದ್ದಿ
Show comments