Select Your Language

Notifications

webdunia
webdunia
webdunia
webdunia

ದೊಡ್ಡವರ ಸಿನಿಮಾ ಬಿಡುಗಡೆಯಾಗದೇ ಚಿತ್ರರಂಗ ಉದ್ದಾರವಾಗಲ್ಲ

ದೊಡ್ಡವರ ಸಿನಿಮಾ ಬಿಡುಗಡೆಯಾಗದೇ ಚಿತ್ರರಂಗ ಉದ್ದಾರವಾಗಲ್ಲ
ಬೆಂಗಳೂರು , ಶುಕ್ರವಾರ, 30 ಅಕ್ಟೋಬರ್ 2020 (09:39 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದಿರುವುದಂತೂ ನಿಜ. ಆದರೆ ಚಿತ್ರಮಂದಿರಗಳಲ್ಲಿ ದೊಡ್ಡವರ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಇದರಿಂದಾಗಿ ಜನ ಥಿಯೇಟರ್ ಗೆ ಬರುತ್ತಿಲ್ಲ.


ಜನ ಥಿಯೇಟರ್ ಗೆ ಬರಬೇಕಾದರೆ ದೊಡ್ಡವರ ಸಿನಿಮಾಗಳು ಬಿಡುಗಡೆಯಾಗಲೇಬೇಕು ಎಂದು ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡಾ ಈಗಾಗಲೇ ಹೇಳಿದ್ದಾರೆ. ಆದರೆ ಸದ್ಯಕ್ಕೆ ಸ್ಟಾರ್ ನಟರು ತಮ್ಮ ಸಿನಿಮಾ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯ ಸುದ್ದಿ ಕೇಳಿಬಂದಾಗ ಅಭಿಮಾನಿಗಳಲ್ಲಿ ಸಂಚಲನ ಮೂಡಿತ್ತು. ಆದರೆ ಅವಸರದಲ್ಲಿ ಬಿಡುಗಡೆ ಮಾಡಲ್ಲ ಎಂದು ಚಿತ್ರತಂಡ ಕೂಡಲೇ ಸ್ಪಷ್ಟನೆ ನೀಡಿತು.

ಪುನೀತ್ ಅಭಿನಯದ ಯುವರತ್ನ ಕೂಡಾ ಬಿಡುಗಡೆಗೆ ಕಾದು ಕೂತಿದೆ. ಆದರೆ ನಿರ್ದೇಶಕ ಆನಂದ್ ರಾಮ್ ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದಿದ್ದರು. ಹೀಗಾಗಿ ದೊಡ್ಡವರ ಸಿನಿಮಾಗಳು ಬಿಡುಗಡೆಯಾಗುವವರೆಗೂ ಚಿತ್ರರಂಗ ಸಹಜ ಸ್ಥಿತಿಗೆ ಬರದು ಎನ್ನುವುದು ಸತ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರದಲ್ಲಿ ಅಭಿಮಾನಿಗಳನ್ನು ವಂಚಿಸಿದ ರಜನೀಕಾಂತ್