Select Your Language

Notifications

webdunia
webdunia
webdunia
webdunia

ಇನ್ನೊಬ್ಬ ನಟನ ಸಾವಿಗೂ ದಿಲೀಪ್ ಕಾರಣವೆಂದು ಆರೋಪ?!

ಇನ್ನೊಬ್ಬ ನಟನ ಸಾವಿಗೂ ದಿಲೀಪ್ ಕಾರಣವೆಂದು ಆರೋಪ?!
Kocchi , ಶುಕ್ರವಾರ, 14 ಜುಲೈ 2017 (10:33 IST)
ಕೊಚ್ಚಿ: ಬಿದ್ದವರ ಮೇಲೆ ಕಲ್ಲು ಎಸೆಯುವುದು ಸಹಜ. ಮಲಯಾಳಂ ನಟ ದಿಲೀಪ್ ಪ್ರಕರಣದಲ್ಲೂ ಅದೇ ಆಗುತ್ತಿದೆ. ಮಲಯಾಳಂ ಸಿನಿಮಾ ರಂಗದಲ್ಲಿ ನಡೆದ ಎರಡು ಅಸಹಜ ಸಾವುಗಳಿಗೆ ದಿಲೀಪ್ ಕಾರಣ ಎಂಬ ಆರೋಪಗಳನ್ನು ಅವರ ಕುಟುಂಬದವರು ಮಾಡುತ್ತಿದ್ದಾರೆ.


ಪೋಷಕ ನಟ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಕಲಾಭವನ್ ಮಣಿ ಅಸಹಜ ಸಾವಿಗೆ ಹಾಗೂ ಇನ್ನೊಬ್ಬ ಮಲಯಾಳಿ ನಟ ಶ್ರೀನಾಥ್ ಅಸಹಜ ಸಾವಿಗೂ ದಿಲೀಪ್ ಪರೋಕ್ಷವಾಗಿ ಕಾರಣರಾಗಿದ್ದರು ಎಂದು ಅವರ ಕುಟುಂಬ ಮಲಯಾಳಂ ಮಾಧ್ಯಮಗಳ ಮೂಲಕ ಆರೋಪಿಸಿವೆ.

ಕಲಾಭವನ್ ಮಣಿ ಮತ್ತು ದಿಲೀಪ್ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪವಿತ್ತು. ಅದರ ಹಿನ್ನಲೆಯಲ್ಲೇ ಮಣಿ ಸಾವನ್ನಪ್ಪಿದ್ದರು ಎಂದು ಮಣಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮಣಿ ಕುಟುಂಬಸ್ಥರ ಆರೋಪದ ಬೆನ್ನಲ್ಲೇ ಇನ್ನೊಬ್ಬ ನಟ ಶ್ರೀನಾಥ್ ಸಾವಿಗೂ ದಿಲೀಪ್ ನಡತೆಯೇ ಕಾರಣ ಎಂದು ಆ ನಟನ ಕುಟುಂಬದವರೂ ಆರೋಪಿಸಿದ್ದಾರೆ. ಸಿನಿಮಾವೊಂದರ ಪಾತ್ರಕ್ಕೆ ಆಯ್ಕೆಯಾದ ಮೇಲೆ ನಟ ದಿಲೀಪ್ ರಿಂದಾಗಿ ಶ್ರೀನಾಥ್ ಗೆ ಅವಕಾಶ ಕೈ ತಪ್ಪಿ ಹೋಯಿತು. ಹೀಗಾಗಿ ಮನನೊಂದು ಶ್ರೀನಾಥ್ ಸಾವನ್ನಪ್ಪಿದ್ದರು ಎಂದು ಅವರ ಕುಟುಂಬಸ್ಥರು ಮಾಧ್ಯಮವೊಂದರಲ್ಲಿ ಹೇಳಿದ್ದಾರೆ. ಹೀಗಾಗಿ ಇದೀಗ ದಿಲೀಪ್ ನಟಿಯ ಮೇಲಿನ ಹಲ್ಲೆ ಪ್ರಕರಣದ ಜತೆಗೆ ಇಂತಹ ಆರೋಪಗಳಿಗೂ ವೃಥಾ ಗುರಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಿನಿಮಾದಲ್ಲೂ ನಟಿಸಿದ್ದ ದಿಲೀಪ್.. ನೆನಪಿದೆಯೇ?