Webdunia - Bharat's app for daily news and videos

Install App

ಫಿಲ್ಮ ಚೇಂಬರ್ ನಲ್ಲಿ ಚರ್ಚೆ ನಡೆಸಿದ್ದರೂ ಕೂಡ ಶೃತಿ ಸರ್ಜಾ ವಿರುದ್ಧ ದೂರು ದಾಖಲಿಸಿದ್ದು ಯಾಕೆ ಗೊತ್ತಾ?

Webdunia
ಸೋಮವಾರ, 29 ಅಕ್ಟೋಬರ್ 2018 (06:44 IST)
ಬೆಂಗಳೂರು : ಫಿಲ್ಮ ಚೇಂಬರ್ ನಲ್ಲಿ ಸಂಧಾನ ಸಭೆ ನಡೆಸಿ ನಿರ್ಧಾರ ಹೇಳಲು ಕಾಲಾವಕಾಶ ಕೊಟ್ಟರು ಕೂಡ  ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಿಸಲು ನಿಜವಾದ ಕಾರಣ ಏನೆಂಬುದು ಇದೀಗ ಬಯಲಾಗಿದೆ.


ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ ಆರೋಪದ ಬಗ್ಗೆ ಫಿಲ್ಮ ಚೇಂಬರ್ ನಲ್ಲಿ ಚರ್ಚೆ ಮಾಡಿದ್ದರೂ ಕೂಡ ನಂತರ ನಟಿ ಶೃತಿ ಅರ್ಜುನ್ ಸರ್ಜಾ ವಿರುದ್ಧ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು. ಇದರಿಂದ ಫಿಲ್ಮ ಚೇಂಬರ್ ನಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಹಿರಿಯರ ಮಾತಿಗೆ ಶೃತಿ ಬೆಲೆ ಕೊಡಲಿಲ್ಲ ಎಂಬ ಬೇಸರ ಎಲ್ಲರಲ್ಲೂ ಮೂಡಿತ್ತು. ಆದರೆ ಅವರು ಈ ರೀತಿ ಮಾಡಲು ಕಾರಣವೆನೆಂಬುದು ಇದೀಗ ಬಯಲಾಗಿದೆ.


ಶೃತಿ ಹರಿಹರನ್ ಅವರಲ್ಲಿ ಹಿರಿಯ ನಟ ಅಂಬರೀಶ್ ಅವರು, ‘ಸರ್ಜಾನಾ ನಾನು ಮನವೊಲಿಸ್ತೀನಿ. ನೀನು ದೂರು ಕೊಡಲ್ಲ ಅಂತಾ ಪ್ರಾಮಿಸ್ ಮಾಡು ಅಂತಾ ಶೃತಿ ಮನವೊಲಿಸಿದರು. ಜೊತೆಗೆ ಮಾಧ್ಯಮದ ಮುಂದೆ ನೀನು ಸರ್ಜಾ ಶೇಕ್‍ಹ್ಯಾಂಡ್ ಮಾಡಿ ಇಲ್ಲೆ ಎಲ್ಲಾ ಇತ್ಯರ್ಥ ಮಾಡ್ಕೋಬೇಕು ಎಂದಾಗ ಶೃತಿ ಇದಕ್ಕೆ ಓಕೆ ಎಂದಿದ್ದರಂತೆ. ಆದರೆ ಅರ್ಜುನ್ ಸರ್ಜಾ ಮಾತ್ರ ಸಂಧಾನಕ್ಕೂ ಬರುವ ಮುನ್ನವೇ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದರು. ಅಲ್ಲದೇ ಅಂಬರೀಶ್ ಅವರು,’’ ನೀನು ತಪ್ಪು ಮಾಡದೇ ಇರಬಹುದು, ಅದಕ್ಕಾಗಿಯೇ ಶೃತಿ ಬಳಿ ಇದು ನನ್ನ ಅರಿವಿಗೆ ಬಾರದೇ ಆಗಿರೋದು, ಪಾತ್ರದಲ್ಲಿ ಇನ್ವಾಲ್ ಆಗಿರುವ ಸಮಸ್ಯೆ ಇರಬಹುದು. ನನ್ನ ಮಗಳಂತೆ ನೀನು ತಪ್ಪಾಗಿ ಅರ್ಥೈಸಿಕೊಳ್ಳದೇ ಇಲ್ಲಿಗೆ ಬಿಟ್ಟು ಬಿಡು” ಅಂತಾ ಶೃತಿ ಬಳಿ ಒಂದು ಮಾತು ಹೇಳಿ ಅಂತಾ ಸರ್ಜಾಗೆ ಹೇಳಿದ್ದರಂತೆ.


ಆದರೆ ಅಂಬರೀಶ್ ಅವರ ಮಾತಿಗೆ ಕೇರ್ ಮಾಡದ ಸರ್ಜಾ ಹಾಗೂ ಧ್ರುವ ಸರ್ಜಾ ನಾವು ಕೋರ್ಟ್‍ನಲ್ಲಿ ನೋಡ್ಕೋತಿವಿ ಅಂತಾ ಹೇಳಿದ್ದರಂತೆ. ಇದರಿಂದ ಕೋಪಗೊಂಡ ಶೃತಿ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ