Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ಭೀಮ ನೋಡಿದ ಪ್ರೇಕ್ಷಕ ಏನಂತಿದ್ದಾನೆ: ಕನ್ನಡ ಚಿತ್ರರಂಗಕ್ಕೆ ಬಲ ನೀಡುತ್ತಾನಾ ಭೀಮ

Duniya Vijay Bheema

Krishnaveni K

ಬೆಂಗಳೂರು , ಶುಕ್ರವಾರ, 9 ಆಗಸ್ಟ್ 2024 (11:38 IST)
Photo Credit: Facebook
ಬೆಂಗಳೂರು: ದುನಿಯಾ ವಿಜಯ್ ನಿರ್ದೇಶಕನಾಗಿ, ನಾಯಕ ನಟನಾಗಿ ಮಾಡಿರುವ ಭೀಮ ಸಿನಿಮಾ ಇಂದು ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ. ಮೊದಲ ದಿನದ ಶೋ ನೋಡಿದ ಪ್ರೇಕ್ಷಕರು ಏನಂತಿದ್ದಾರೆ ಎಂಬ ರಿವ್ಯೂ ಇಲ್ಲಿದೆ.

ಭೀಮ ಸಿನಿಮಾ ದುನಿಯಾ ವಿಜಯ್ ಟೇಸ್ಟ್ ನ ಸಿನಿಮಾ. ದುನಿಯಾ ವಿಜಯ್ ಸಿನಿಮಾಗಳೆಂದರೆ ಭರ್ಜರಿ ಹೊಡೆದಾಟಗಳು, ಮಾಸ್ ಅಂಶಗಳು ಸಾಕಷ್ಟಿರುತ್ತದೆ. ಈ ಹಿಂದಿನ ಸಿನಿಮಾಗಳಂತೆ ಈ ಸಿನಿಮಾದಲ್ಲೂ ಮಾಸ್ ಅಂಶಗಳು ಸಾಕಷ್ಟಿದೆ. ಇಲ್ಲಿ ರೌಡಿಸಂ ಬಗ್ಗೆ ಕತೆ ಹೇಳಲಾಗಿದೆ.

ಬೆಂಗಳೂರಿನ ಗಲ್ಲಿಗಳ ನಡೆಯುವ ರೌಡಿಸಂ, ಗಾಂಜಾ ವ್ಯಸನ, ಯುವಕರನ್ನು ರೌಡಿಸಂಗೆ ಬಳಸಿಕೊಳ್ಳುವ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ. ಇದೇ ಕಾರಣಕ್ಕೆ ಸಿನಿಮಾಗೆ ಸೆನ್ಸಾರ್ ಮಂಡಳಿ ಅಡಲ್ಟ್ ಸರ್ಟಿಫಿಕೇಟ್ ನೀಡಲಾಗಿದೆ. ಆದರೆ ಈ ಅಂಶಗಳನ್ನಿಟ್ಟುಕೊಂಡೇ ವಿಜಿ ಒಂದು ಮೆಸೇಜ್ ಕೊಡಲು ಹೊರಟಿದ್ದಾರೆ.

ಏನೂ ನಿರೀಕ್ಷೆಯಿರದೇ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರಿಗೆ ಸಿನಿಮಾ ರಸದೌತಣ ಬಡಿಸಿದೆ. ಸಿನಿಮಾವನ್ನು ವಿಜಿ ಕಟ್ಟಿಕೊಟ್ಟ ರೀತಿ ಮತ್ತು ಚಿತ್ರದ ಹಾಡುಗಳು, ಹಿನ್ನಲೆ ಸಂಗೀತ ಪ್ರೇಕ್ಷಕರಿಗೆ ಇಷ್ಟವಾಗಿದೆ.  ಹಲವು ದಿನಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟನ ಸಿನಿಮಾವೊಂದು ಬಿಡುಗಡೆಯಾಗಿದೆ. ಚಿತ್ರಗಳಿಲ್ಲದೇ ಬಣಗುಡುತ್ತಿದ್ದ ಚಿತ್ರಮಂದಿರಕ್ಕೆ ಈ ಸಿನಿಮಾ ಬೂಸ್ಟ್ ನೀಡಬಹುದು ಎಂದು ನಿರೀಕ್ಷೆಯಿದೆ. ಸಲಗ ನಂತರ ದುನಿಯಾ ವಿಜಯ್ ನಿರ್ದೇಶಕರಾಗಿ ಮತ್ತೊಮ್ಮೆ ಗೆದ್ದಿದ್ದಾರೆ ಎಂದು ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಾರಕೀಶ್ ಬಂಗಲೆ ಖರೀದಿಸಿದ್ರೂ ರಿಷಬ್ ಶೆಟ್ಟಿ ಒಂದು ದಿನವೂ ಅಲ್ಲಿ ಕಾಲ ಕಳೆದಿಲ್ಲ ಯಾಕೆ