Select Your Language

Notifications

webdunia
webdunia
webdunia
webdunia

ದ್ವಾರಕೀಶ್ ಬಂಗಲೆ ಖರೀದಿಸಿದ್ರೂ ರಿಷಬ್ ಶೆಟ್ಟಿ ಒಂದು ದಿನವೂ ಅಲ್ಲಿ ಕಾಲ ಕಳೆದಿಲ್ಲ ಯಾಕೆ

Rishab Shetty

Krishnaveni K

ಬೆಂಗಳೂರು , ಶುಕ್ರವಾರ, 9 ಆಗಸ್ಟ್ 2024 (11:22 IST)
ಬೆಂಗಳೂರು: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ ದ್ವಾರಕೀಶ್ ಅವರ ಬಂಗಲೆಯನ್ನು ಖರೀದಿಸಿದ್ದರು ಎಂದು ಎಲ್ಲರಿಗೂ ಗೊತ್ತು. ಆದರೆ ಒಂದು ದಿನಕ್ಕೂ ಅಲ್ಲಿ ರಿಷಬ್ ಅಲ್ಲಿ ವಾಸಿಸಲಿಲ್ಲ. ಅದಕ್ಕೆ ಕಾರಣವೇನು ಎಂದು ಅವರ ಗೆಳೆಯ ಪ್ರಮೋದ್ ಶೆಟ್ಟಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಎಚ್ ಎಸ್ ಆರ್ ಲೇ ಔಟ್ ನಲ್ಲಿ ದ್ವಾರಕೀಶ್ ಆಸೆಪಟ್ಟು ದೊಡ್ಡ ಬಂಗಲೆಯೊಂದನ್ನು ಕಟ್ಟಿಸಿದ್ದರು. ಆದರೆ ತಮ್ಮ ಸಿನಿಮಾಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಿದಾಗ ಸಾಲ ತೀರಿಸಲು ದ್ವಾರಕೀಶ್ ಈ ಮನೆಯನ್ನು ಮಾರಲು ತೀರ್ಮಾನಿಸುತ್ತಾರೆ. ದ್ವಾರಕೀಶ್ ಮನೆಯನ್ನು ಆಗ ಖರೀದಿ ಮಾಡುವವರು ರಿಷಬ್ ಶೆಟ್ಟಿ.

ರಿಷಬ್ ಶೆಟ್ಟಿ ಈ ಮನೆಯನ್ನು ಬರೋಬ್ಬರಿ 10.5 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದರು. ಇಷ್ಟು ದುಬಾರಿ ಬೆಲೆಗೆ ಖರೀದಿ ಮಾಡಿದ ಮೇಲೆ ರಿಷಬ್ ಅಲ್ಲಿಗೆ ಶಿಫ್ಟ್ ಆಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ರಿಷಬ್ ಒಮ್ಮೆಯೂ ಅಲ್ಲಿ ವಾಸ ಮಾಡಲೇ ಇಲ್ಲ.

ಯಾಕೆ ಎಂಬ ಪ್ರಶ್ನೆಗೆ ಪ್ರಮೋದ್ ಶೆಟ್ಟಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ‘ಆ ಮನೆಯನ್ನು ಅಲ್ಲಿ ವಾಸಿಸಬೇಕು ಎನ್ನುವ ಉದ್ದೇಶದಿಂದ ಅವನು ಖರೀದಿ ಮಾಡಲಿಲ್ಲ. ಅಲ್ಲಿ ಒಂದು ದಿನವೂ, ಒಂದು ರಾತ್ರಿಯೂ ಅವನು ಕಳೆದಿಲ್ಲ. ಆ ಮನೆಯನ್ನು ಖರೀದಿ ಮಾಡಿದ್ದು ಸಹಾಯವಾಗಲಿ, ಬೇರೆ ಏನೋ ಕಮಿಟ್ ಮೆಂಟ್ ದೃಷ್ಟಿಯಿಂದ ಅಷ್ಟೆ. ಅಲ್ಲಿ ನೆಲೆಸಬೇಕು ಎನ್ನುವ ಯಾವ ಯೋಜನೆಯೂ ಅವನಿಗಿಲ್ಲ’ ಎಂದು ಪ್ರಮೋದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣಾವ್ರ 'ಗಂಧದಗುಡಿ‘ ಸಿನಿಮಾ ಸ್ಟೋರಿ ನಿಜ ಜೀವನದಲ್ಲಿ ಆಗಲಿ ಎಂದಾ ಪವನ್ ಕಲ್ಯಾಣ್