Select Your Language

Notifications

webdunia
webdunia
webdunia
webdunia

ಯಶ್ ಗೆ ದಾದಾ ಸಾಹೇಬ್ ಪ್ರಶಸ್ತಿ: ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಡಾ. ರಾಜ್ ಅಭಿಮಾನಿ ಬಳಗ

ಯಶ್ ಗೆ ದಾದಾ ಸಾಹೇಬ್ ಪ್ರಶಸ್ತಿ: ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಡಾ. ರಾಜ್ ಅಭಿಮಾನಿ ಬಳಗ
ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2019 (07:38 IST)
ಬೆಂಗಳೂರು: ಡಾ. ರಾಜ್ ಕುಮಾರ್ ಗೆ ದಾದಾ ಸಾಹೇಬ್ ಫಾಲ್ಕೆ ಸಿಕ್ಕಿದ ನಂತರ ಕನ್ನಡ ನಟರೊಬ್ಬರಿಗೆ ಇದೇ ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿದೆಯೆಂದರೆ ಅದು ರಾಕಿಂಗ್ ಸ್ಟಾರ್ ಯಶ್ ಗೆ. ಆದರೆ ಇಬ್ಬರಿಗೂ ಸಿಕ್ಕಿದ ಪ್ರಶಸ್ತಿಯೇ ಬೇರೆ ಬೇರೆ!


ಯಶ್ ಗೆ ದಾದಾ ಸಾಹೇಬ್ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಸಿಕ್ಕಿದ್ದರೆ, ಡಾ. ರಾಜ್ ಗೆ ಸ್ವತಃ ಭಾರತ ಸರ್ಕಾರ ಈ ಗೌರವ ನೀಡಿತ್ತು. ಹಾಗಿದ್ದರೂ ಕೆಲವರು ಯಶ್ ಗೆ ದಾದಾ ಸಾಹೇಬ್ ಪ್ರಶಸ್ತಿ ಸಿಕ್ಕಿರುವುದಕ್ಕೆ ರಾಜ್ ನಂತರ ಈ ಪ್ರಶಸ್ತಿ ಪಡೆದ ನಟ ಎಂದು ಹೊಗಳುತ್ತಿರುವುದು ರಾಜ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಡಾ. ರಾಜ್ ಗೆ ಯಾರೂ ಸಾಟಿಯಿಲ್ಲ. ರಾಜ್ ಅವರಿಗೆ ಸರಿಸಮನಾದ ನಟ ಇನ್ನೊಬ್ಬರಿರಲಿಲ್ಲ, ಮತ್ತು ಇನ್ನು ಮುಂದೆ ಬರಲೂ ಸಾಧ್ಯವಿಲ್ಲ. ಹಾಗಿದ್ದರೂ ಕೆಲವರು ಇದನ್ನೇ ತಪ್ಪಾಗಿ ತಿಳಿದುಕೊಂಡು ರಾಜ್ ರನ್ನು ಸರಿಗಟ್ಟುವ ನಟ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅಣ್ಣಾವ್ರ ಸರಿಗಟ್ಟುವ ನಟ ಇನ್ನೂ ಬಂದಿಲ್ಲ ಎಂದು ರಾಜ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೈಟಿಂಗ್ ಮಾಡಲು ವಿದೇಶಕ್ಕೆ ತೆರಳಿದ ಕಿಚ್ಚ ಸುದೀಪ್