Webdunia - Bharat's app for daily news and videos

Install App

ಸಾಯೋ ಮಾತಾಡ್ಬೇಡಿ ಶಿವಣ್ಣ: ಡಾಲಿ ಧನಂಜಯ್

Webdunia
ಸೋಮವಾರ, 20 ಡಿಸೆಂಬರ್ 2021 (09:40 IST)
ಬೆಂಗಳೂರು: ಬಡವ ರಾಸ್ಕಲ್ ಈವೆಂಟ್ ನಲ್ಲಿ ನಟ ಶಿವರಾಜ್ ಕುಮಾರ್ ಕನ್ನಡ ಬಾವುಟ ಸುಟ್ಟ ಪ್ರಕರಣದ ಬಗ್ಗೆ ಮಾತನಾಡುವಾಗ ಭಾವುಕರಾಗಿ ಕನ್ನಡಕ್ಕಾಗಿ ಸಾಯೋದಕ್ಕೂ ಸಿದ್ಧ ಎಂದಿದ್ದರು. ಈ ಮಾತು ಸ್ಯಾಂಡಲ್ ವುಡ್ ನಟರನ್ನು ಭಾವುಕರಾಗಿಸಿದೆ.

ವೇದಿಕೆಯಲ್ಲಿ ಧ್ವಜಕ್ಕೆ ಹಾನಿಯಾದ ಬಗ್ಗೆ ಮಾತನಾಡುವ 60 ವರ್ಷ ಸಾಕಿದ್ದೀರಿ ನನ್ನ. ಇನ್ನು ಮುಂದೆ ಭಾಷೆಗೋಸ್ಕರ ಹೋರಾಡಿ ಸಾಯಬೇಕು ಎಂದರೆ ನನ್ನ ಜೀವ ಹೋದರೂ ಪರವಾಗಿಲ್ಲ ಎಂದು ವೇದಿಕೆ ಮೇಲೆ ಭಾವುಕರಾಗಿ ಶಿವಣ್ಣ ಮಾತನಾಡಿದ್ದರು.

ಅವರು ಈ ಮಾತು ಹೇಳುತ್ತಿದ್ದಂತೇ ಅಲ್ಲೇ ಇದ್ದ ನಟಿ ತಾರಾ ಹೀಗೆಲ್ಲಾ ಮಾತಾಡ್ಬೇಡಿ ಎನ್ನುತ್ತಾರೆ. ಅಲ್ಲದೆ, ವೇದಿಕೆ ಮೇಲೆ ಬಂದ ಡಾಲಿ ಧನಂಜಯ್ ‘ನೀವು ಸಾಯೋ ಮಾತಾಡ್ಬೇಡಿ ಅಣ್ಣ. ನಾವು ಇಲ್ಲಿರೋ ಎಲ್ಲರೂ ಒಂದೊಂದು ವರ್ಷ ನಿಮಗೇ ಕೊಡ್ತೀವಿ. ಅಷ್ಟು ವರ್ಷ ನೀವು ಬದುಕಬೇಕು ಅಣ್ಣ’ ಎಂದು ಭರವಸೆ ತುಂಬಿದ್ದಾರೆ. ಸಹೋದರ ಪುನೀತ್ ಸಾವನ್ನಪ್ಪಿದ ಬಳಿಕ ಶಿವಣ್ಣ ಯಾವುದೇ ವೇದಿಕೆಗೆ ಬಂದರೂ ಭಾವುಕರಾಗುತ್ತಾರೆ. ಇಂದೂ ಕೂಡಾ ಅಷ್ಟೇ ಭಾವುಕರಾಗಿ ಮಾತನಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments