Webdunia - Bharat's app for daily news and videos

Install App

ನೈಟ್ ಕರ್ಫ್ಯೂ ದಿನ ನಡೆದಿದ್ದ ಘಟನೆಗೆ ಸ್ಪಷ್ಟನೆ ನೀಡಿದ ನಟಿ ದಿವ್ಯಾ ಸುರೇಶ್

Webdunia
ಶುಕ್ರವಾರ, 31 ಡಿಸೆಂಬರ್ 2021 (10:28 IST)
ಬೆಂಗಳೂರು: ಮೊನ್ನೆ ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ಪೊಲೀಸರು ಮತ್ತು ಮಾಧ್ಯಮಗಳ ಜೊತೆ ನಡೆದ ವಾಗ್ವಾದದ ಬಗ್ಗೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ಎಲ್ಲಾ ಮಾಧ್ಯಮಗಳಲ್ಲಿ ಅಂದು ನಾನು ಪಬ್ ಗೆ ಹೋಗಿದ್ದೆ ಎಂದು ಹೇಳಿದ್ದಾರೆ. ಬೇಕಿದ್ದರೆ ನೀವೇ ಅಲ್ಲಿ ಹೋಗಿ ನೋಡಿ. ಅದು ಪಬ್ ಅಲ್ಲ, ಕೆಫೆ ಅಷ್ಟೇ. ಅಷ್ಟೇ ಅಲ್ಲದೆ ನಾನು ಕುಡಿದಿದ್ದೆ, ಕಿರಿಕ್ ಮಾಡಿದ್ದೆ ಎಂದೆಲ್ಲಾ ಹೇಳಿದರು. ನಾನು ಕುಡಿದಿದ್ದೆ ಎಂದು ನೀವು ನೋಡಿದ್ದೀರಾ? ನಾನು ನಿಮ್ಮ ಜೊತೆ ಏನು ಮಿಸ್ ಬಿಹೇವ್ ಮಾಡಿದ್ದೀನಿ? ಎಂದು ಪ್ರಶ್ನಿಸಿದ್ದಾರೆ.

‘ಆವತ್ತು 9 ಗಂಟೆಗೆ ನಾನು ಕೆಫೆಯಿಂದ ಫ್ರೆಂಡ್ ಜೊತೆ ಹೊರಬಂದಿದ್ದೆ. 9.10 ಕ್ಕೆ ಕ್ಯಾಬ್ ಬುಕ್ ಮಾಡಿದ್ದೆ. ಅದನ್ನು ಪೊಲೀಸರಿಗೆ ಪ್ರೂಫ್ ಆಗಿ ತೋರಿಸಿದೆವು. ಅವರು ಹೋಗಿ ಎಂದರು. ಆದರೆ ಅಷ್ಟರಲ್ಲಿ ಮಾಧ್ಯಮಗಳು ಅದನ್ನೇ ಕ್ಯಾಮರಾದಲ್ಲಿ ಶೂಟ್ ಮಾಡಲು ಶುರು ಮಾಡಿದರು. ಆಗ ನನ್ನ ಗೆಳೆಯ ಜವಾಬ್ಧಾರಿಯುತವಾಗಿ ದಯವಿಟ್ಟು ಕ್ಯಾಮರಾದಲ್ಲಿ ಏಕೆ ಶೂಟ್ ಮಾಡ್ತಿದ್ದೀರಾ ಅಂತ ಕೇಳಿದರು. ನಾನು ಆವತ್ತು ಅಲ್ಲಿ ವಾದ ಮಾಡುತ್ತಾ ಕೂತರೆ 10 ಗಂಟೆಯಾಗುತ್ತಿತ್ತು. ಆದರೆ ನಾನು ನನ್ನ ಕ್ಯಾಬ್ ಬಂದೊಡನೆ ಅಲ್ಲಿಂದ ತೆರಳಿದ್ದೇನೆ. ವಿನಾಕಾರಣ ವಿವಾದ ಮಾಡಲಾಗಿದೆ’ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments