Webdunia - Bharat's app for daily news and videos

Install App

ಸೆಲೆಬ್ರಿಟಿಗಳು ವಿಚ್ಛೇದನವಾದರೂ ಟ್ರೋಲ್ ಆಗೋದು ಹೆಣ್ಣು ಮಕ್ಕಳೇ!

Webdunia
ಸೋಮವಾರ, 22 ಆಗಸ್ಟ್ 2022 (08:50 IST)
ನವದೆಹಲಿ: ನಮ್ಮ ಸಮಾಜ ಹೇಗೆ ಎಂದರೆ ಗಂಡ-ಹೆಂಡತಿ ವಿಚಾರದಲ್ಲಿ ಏನೇ ತಪ್ಪಾದರೂ ಮೊದಲು ಹೆಣ್ಣಿನ ಮೇಲೆಯೇ ಅನುಮಾನ ಪಡುತ್ತಾರೆ. ಇದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಸೆಲೆಬ್ರಿಟಿಗಳು ವಿಚ್ಛೇದನವಾದಾಗ ಇಲ್ಲವೇ ಬ್ರೇಕ್ ಅಪ್ ಆದಾಗ ಹೆಚ್ಚು ಟ್ರೋಲ್ ಆಗೋದು ಹುಡುಗಿಯರೇ ಎನ್ನುವುದು ವಿಪರ್ಯಾಸ. ಇದಕ್ಕೆ ಕೆಲವು ಜೋಡಿಗಳ ಉದಾಹರಣೆ ಇಲ್ಲಿದೆ.

ರಶ್ಮಿಕಾ-ರಕ್ಷಿತ್ ಶೆಟ್ಟಿ: ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಜೋಡಿ ಬ್ರೇಕ್ ಅಪ್ ಮಾಡಿಕೊಂಡರು. ಇದಕ್ಕೆ ಕಾರಣ ಏನು ಎಂಬುದನ್ನು ಇದುವರೆಗೆ ಈ ಜೋಡಿ ಎಲ್ಲೂ ಬಿಟ್ಟುಕೊಟ್ಟಿಲ್ಲ. ಹಾಗಿದ್ದರೂ ಈಗಲೂ ಈ ವಿಚಾರಕ್ಕೆ ರಶ್ಮಿಕಾ ಟ್ರೋಲ್ ಆಗುತ್ತಲೇ ಇರುತ್ತಾರೆ.

ಸಮಂತಾ ಋತು ಪ್ರಭು-ನಾಗಚೈತನ್ಯ: ಟಾಲಿವುಡ್ ನ ಈ ಮೋಸ್ಟ್ ವಾಂಟೆಡ್ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದು ಅಭಿಮಾನಿಗಳಿಗೆ ತೀವ್ರ ಶಾಕ್ ಆಗಿತ್ತು. ವಿಪರ್ಯಾಸವೆಂದರೆ ಸಮಂತಾ ಕೊಂಚ ಗ್ಲಾಮರಸ್ ಫೋಟೋ ಪ್ರಕಟಿಸಿದರೂ ಅವರ ನಡತೆ ಬಗ್ಗೆ ಟ್ರೋಲ್ ಗೊಳಗಾಗುತ್ತಲೇ ಇದ್ದಾರೆ.

ಮೊಹಮ್ಮದ್ ಶಮಿ-ಹಸೀನ್ ಜಹಾನ್: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ, ಹಸೀನ್ ಜಹಾನ್ ದೂರವಾದಾಗ ಮೊದಲು ಹಸೀನ್ ಬಗ್ಗೆ ಜನ ಅನುಕಂಪ ವ್ಯಕ್ತಪಡಿಸಿದ್ದರು. ಆದರೆ ಬಳಿಕ ಪರಿಸ್ಥಿತಿ ಬದಲಾಯಿತು. ಹಸೀನ್ ಕೊಂಚ ಗ್ಲಾಮರಸ್ ಆಗಿ ಡ್ರೆಸ್ ಮಾಡಿಕೊಂಡರೂ ಟ್ರೋಲ್ ಗಳಾಗುತ್ತಿದ್ದವು. ಮೊಹಮ್ಮದ್ ಶಮಿ ಬಗ್ಗೆ ನಿಧಾನವಾಗಿ ಅನುಕಂಪ ಹೆಚ್ಚಾಗಿತ್ತು.

ಇದಕ್ಕೆ ಲೇಟೆಸ್ಟ್ ಸೇರ್ಪಡೆ ಯಜುವೇಂದ್ರ ಚಾಹಲ್-ಧನಶ್ರೀ ವರ್ಮಾ ದಂಪತಿ. ಇವರಿಬ್ಬರು ಇನ್ನೂ ದೂರವಾಗುತ್ತಿದ್ದೇವೆ ಎಂದು ಪ್ರಕಟಿಸಿಲ್ಲ. ಹಾಗಿದ್ದರೂ ರೂಮರ್ ಗಳ ಆಧಾರದ ಮೇಲೆ ಜನ ಧನಶ್ರೀ ವರ್ಮಾರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಧನಶ್ರೀ ಕೇವಲ ಜನಪ್ರಿಯತೆಗಾಗಿ ಚಾಹಲ್ ರನ್ನು ಮದುವೆಯಾದರು ಎಂದು ಟೀಕಿಸಿದರು.

ಸಾಮಾನ್ಯ ಜನರು ವಿಚ್ಛೇದನವಾದಾಗ ಮಹಿಳೆಯನ್ನು ಸಮಾಜ ನೋಡುವ ರೀತಿಯೇ ಬದಲಾಗುತ್ತದೆ ಎನ್ನುವುದು ಸತ್ಯ. ಆದರೆ ಸೆಲೆಬ್ರಿಟಿಗಳ ವಿಚಾರದಲ್ಲೂ ಮಹಿಳೆಯೇ ಹೆಚ್ಚು ಟಾರ್ಗೆಟ್ ಆಗುತ್ತಾರೆ ಎನ್ನುವುದು ನಿಜ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

ಮುಂದಿನ ಸುದ್ದಿ
Show comments