ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

Krishnaveni K
ಸೋಮವಾರ, 17 ನವೆಂಬರ್ 2025 (09:51 IST)
Photo Credit: X
ಹೈದರಾಬಾದ್: ಮಹೇಶ್ ಬಾಬು ನಾಯಕರಾಗಿರುವ ತಮ್ಮ ಮುಂಬರುವ ವಾರಣಾಸಿ ಸಿನಿಮಾ ಟೈಟಲ್ ಟೀಸರ್ ಲಾಂಚ್ ನಲ್ಲಿ ನಿರ್ದೇಶಕ ರಾಜಮೌಳಿ ಆಂಜನೇಯ ಸ್ವಾಮಿಯನ್ನು ಬೈದಿದ್ದು ವಿವಾದಕ್ಕೆ ಕಾರಣವಾಗಿದೆ.

ಆರ್ ಆರ್ ಆರ್ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ವಾರಣಾಸಿ. ಇದರ ಟೈಟಲ್ ಟೀಸರ್ ಲಾಂಚ್ ಈವೆಂಟ್ ನ್ನು ರಾಜಮೌಳಿ ಅದ್ಧೂರಿಯಾಗಿ ಆಯೋಜಿಸಿದ್ದರು. ಈ ವೇಳೆ ಟೀಸರ್ ಪರದೆ ಮೇಲೆ ಬರಲು ಕೊಂಚ ತಾಂತ್ರಿಕ ಸಮಸ್ಯೆಯಾಯಿತು.

ಇದರಿಂದ ರಾಜಮೌಳಿ ಹತಾಶೆಗೊಳಗಾದರು. ಇಷ್ಟೊಂದು ಜನ ಸೇರಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕ್ಲಿಪ್ ತೆರೆ ಮೇಲೆ ಬರಲು ತೊಂದರೆಗಳಾದಾಗ ರಾಜಮೌಳಿ ಹತಾಶೆಯಿಂದ ಹನುಮಾನ್ ದೇವರಿಗೆ ಬೈದಿದ್ದಾರೆ.

ನಾನು ಹೆಚ್ಚು ದೇವರನ್ನು ನಂಬುವವನಲ್ಲ. ಆದರೆ ನನ್ನ ತಂದೆ ಯಾವತ್ತೂ ಹೇಳುತ್ತಿದ್ದರು. ಆಂಜನೇಯ ಸ್ವಾಮಿ ಯಾವತ್ತೂ ನಿನ್ನ ಜೊತೆಗಿರುತ್ತಾರೆ ಎನ್ನುತ್ತಿದ್ದರು. ಆದರೆ ಇದೇನಾ ಹನುಮಂತನ ನನ್ನ ಜೊತೆಗಿದ್ದಿದ್ದು? ನನ್ನ ಪತ್ನಿ ಯಾವಾಗಲೂ ಹನುಮಂತನ ಪೂಜೆ ಮಾಡುತ್ತಾಳೆ. ಅವನನ್ನು ತನ್ನ ಫ್ರೆಂಡ್ ಎನ್ನುವ ರೀತಿ ಮಾತನಾಡುತ್ತಾಳೆ. ಆದರೆ ಆ ಹನುಮಂತ ಹೀಗೇನಾ ಮಾಡೋದು ಎಂದು ಬೈದಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.

ತಾಂತ್ರಿಕ ಸಮಸ್ಯೆಯಾಗಿದ್ದಕ್ಕೆ ಹಿಂದೂಗಳು ಆರಾಧಿಸುವ ಹನುಮಂತನನ್ನು ಬೈಯುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ದೊಡ್ಡ ವಿವಾದ ಮಾಡಬೇಕಾಗಿಲ್ಲ. ಏನೋ ವಿಡಿಯೋ ಕ್ಲಿಪ್ ಬಾರದೇ ಇದ್ದಾಗ ಹತಾಶೆಯಿಂದ ಈ ರೀತಿ ಮಾಡಿದ್ದಾರೆ. ಅದನ್ನು ದೊಡ್ಡದು ಮಾಡುವುದು ಬೇಡ. ರಾಜಮೌಳಿಗೆ ಹಿಂದೂ ದೇವರ ಬಗ್ಗೆ ಅಪಾರ ಗೌರವವಿದೆ. ಇದಕ್ಕೆ ಅವರ ಸಿನಿಮಾಗಳೇ ಸಾಕ್ಷಿ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ಮುಂದಿನ ಸುದ್ದಿ
Show comments