Webdunia - Bharat's app for daily news and videos

Install App

ಹಿಂದಿ ಮಾತನಾಡುವ ಹುಡುಗಿ ಜತೆ ಆದ ಅನುಭವ ಬಿಚ್ಚಿಟ್ಟ ನಿರ್ದೇಶಕ ಕೆಎಂ ಚೈತನ್ಯ

Webdunia
ಶುಕ್ರವಾರ, 14 ಆಗಸ್ಟ್ 2020 (11:57 IST)
ಬೆಂಗಳೂರು: ಹಿಂದಿ ಹೇರಿಕೆ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಸ್ಯಾಂಡಲ್ ವುಡ್ ನಿರ್ದೇಶಕ ಕೆಎಂ ಚೈತನ್ಯ ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

 

ಬೆಳ್ಳಂ ಬೆಳಿಗ್ಗೆ ಟಾಟಾ ಸ್ಕೈ ಸಿಬ್ಬಂದಿ ಹುಡುಗಿಯೊಬ್ಬಳು ಕರೆ ಮಾಡಿ ಏಕಾ ಏಕಿ ಹಿಂದಿಯಲ್ಲಿ ಮಾತನಾಡಿದಳು. ನನಗೆ ಹಿಂದಿ ಸಿನಿಮಾ, ಹಾಡುಗಳೆಂದರೆ ಇಷ್ಟ. ಆದರೆ ನನಗೆ ಆ ಭಾಷೆ ಬರುತ್ತದೋ ಇಲ್ಲವೋ ಎಂದು ಗೊತ್ತಿಲ್ಲದೇ ಆಕೆ ಇಷ್ಟುದ್ದ ಮಾತನಾಡಿದಾಗ ನಾನು ಅರ್ಧದಲ್ಲಿ ಆಕೆಯನ್ನು ತಡೆದು ನಿಮಗೆ ಕನ್ನಡ ಅಥವಾ ಇಂಗ್ಲಿಷ್ ಬರುತ್ತದೆಯೇ? ಆ ಭಾಷೆಯಲ್ಲಿ ಮಾತನಾಡಿ ಎಂದೆ.

ಆಗ ಅವಳು ಇಲ್ಲ ಅಂದಳು. ಅವಳ ಪ್ರಕಾರ ಹಿಂದಿ ನಮ್ಮ ದೇಶದ ಅಧಿಕೃತ ಭಾಷೆ. ಹಾಗಾಗಿ ಎಲ್ಲರಿಗೂ ಹಿಂದಿ ಗೊತ್ತಿರಲೇಬೇಕು. ನಮ್ಮಲ್ಲಿ ಹೆಚ್ಚಿನವರು ಇದನ್ನೇ ಅಂದುಕೊಂಡಿದ್ದಾರೆ. ಹಾಗಿದ್ದರೆ ಪರದೇಶದ ಇಂಗ್ಲಿಷ್ ಭಾಷೆ ಮಾತನಾಡಬೇಕೇ ಎಂದು ಕೇಳುತ್ತಾರೆ.

ನಾವು ದಕ್ಷಿಣ ಭಾರತದವರಿಗೆ ಹಿಂದಿ ಭಾಷೆಯೂ ವಿದೇಶದಿಂದ ಬಂದ ಇಂಗ್ಲಿಷ್ ಭಾಷೆಗೆ ಸರಿಸಮಾನ. ಹೀಗಾಗಿ ಇನ್ನು ಮುಂದೆ ಯಾರೇ ತಮ್ಮ ಇಷ್ಟ ಬಂದ ಭಾಷೆಯಲ್ಲಿ ಮಾತನಾಡಿದರೂ ನಿಮಗೆ ಆ ಭಾಷೆ ಗೊತ್ತಿದ್ದರೂ ಇದ್ದಕ್ಕಿದ್ದಂತೆ ಕನ್ನಡ ಬಿಟ್ಟು ಅವರ ಭಾಷೆಯಲ್ಲಿ ಮಾತನಾಡುವುದನ್ನು ಬಿಡಿ ಎಂದು ಚೈತನ್ಯ ಹೇಳಿಕೊಂಡಿದ್ದಾರೆ. ಅವರ ಈ ಮಾತಿಗೆ ಸಂಸದೆ ಸುಮಲತಾ ಅಂಬರೀಶ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ಹಿಂದಿ ವಿರೋಧಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments