Publish Date: Wed, 11 Oct 2017 (10:47 IST)
Updated Date: Wed, 11 Oct 2017 (10:50 IST)
ದಾವಣೆಗೆರೆ: ಬಾಲಿವುಡ್ ಬೆಡಗಿ ‘ಪದ್ಮಾವತಿ’ ದೀಪಿಕಾ ಪಡುಕೋಣೆ ದಾವಣೆಗೆರೆಗೆ ಭೇಟಿಕೊಟ್ಟಿದ್ದಾರೆ. ಮೂಲತಃ ಕನ್ನಡ ನಾಡಿನವರಾದ ದೀಪಿಕಾ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದರು.
ಪದ್ಮಾವತಿ ಸಿನಿಮಾದ ಟ್ರೇಲರ್ ಹಿಟ್ ಆದ ಖುಷಿಯಲ್ಲಿರುವ ದೀಪಿಕಾ ತಾವು ಸಂಸ್ಥಾಪಕ ಸದಸ್ಯೆಯಾಗಿರುವ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಸ್ವತಃ ದೀಪಿಕಾ ಹಿಂದೊಮ್ಮೆ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನಿನ್ನೂ ಖಿನ್ನತೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ದೀಪಿಕಾ ಅಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ