Webdunia - Bharat's app for daily news and videos

Install App

ರೇಣುಕಾಸ್ವಾಮಿ ಪ್ರಕರಣದ ಸಾಕ್ಷಿ ಜೊತೆ ವಾಮನ ಸಿನಿಮಾ ವೀಕ್ಷಣೆ: ದರ್ಶನ್ ಗೆ ಕಾದಿದೆ ಮತ್ತೊಂದು ಸಂಕಷ್ಟ

Krishnaveni K
ಗುರುವಾರ, 10 ಏಪ್ರಿಲ್ 2025 (09:52 IST)
ಬೆಂಗಳೂರು: ತಮ್ಮ ಆಪ್ತ ಧನ್ವೀರ್ ಗೌಡ ನಾಯಕರಾಗಿರುವ ವಾಮನ ಸಿನಿಮಾ ವೀಕ್ಷಿಸಲು ಬಂದ ನಟ ದರ್ಶನ್ ಸಂಕಷ್ಟಕ್ಕೀಡಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷಿ ಜೊತೆಯೇ ಕೂತು ಸಿನಿಮಾ ವೀಕ್ಷಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ಚಿಕ್ಕಣ್ಣ ಕೂಡಾ ಸಾಕ್ಷಿಯಾಗಿದ್ದಾರೆ. ಆದರೆ ನಿನ್ನೆ ವಾಮನ ಸಿನಿಮಾವನ್ನು ಚಿಕ್ಕಣ್ಣ ಪಕ್ಕದಲ್ಲೇ ಕುಳಿತು ದರ್ಶನ್ ವೀಕ್ಷಣೆ ಮಾಡಿದ್ದಾರೆ. ಇದೇ ವಿಚಾರ ಈಗ ಅವರಿಗೆ ಸಂಕಷ್ಟ ತಂದೊಡ್ಡಲಿದೆ.

ದರ್ಶನ್ ಗೆ ಜಾಮೀನು ನೀಡುವಾಗ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಇದರಲ್ಲಿ ಅವರು ಯಾವುದೇ ಕಾರಣಕ್ಕೂ ಸಾಕ್ಷಿಗಳನ್ನು ಭೇಟಿ ಮಾಡುವುದು, ಪ್ರಭಾವ ಬೀರುವುದು ಮಾಡಬಾರದು. ಆದರೆ ನಿನ್ನೆ ಚಿಕ್ಕಣ್ಣ ಜೊತೆಯೇ ಕುಳಿತು ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಇದನ್ನೇ ಪೊಲೀಸರು ಅವರ ಜಾಮೀನು ರದ್ದುಮಾಡುವಂತೆ ನ್ಯಾಯಾಲಯದಲ್ಲಿ ವಾದ ಮಾಢಬಹುದು. ಈ ಹಿಂದೆ ಸಾಕ್ಷಿಯಾಗಿದ್ದ ಚಿಕ್ಕಣ್ಣ ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್ ರನ್ನು ಭೇಟಿ ಮಾಡಿದ್ದಾಗಲೂ ಪೊಲೀಸರು ವಿಚಾರಣೆ ನಡೆಸಿದ್ದರು. ಈಗ ಮತ್ತೆ ಚಿಕ್ಕಣ್ಣ ಮತ್ತು ದರ್ಶನ್ ಗೆ ಪೊಲೀಸರು ಬುಲಾವ್ ನೀಡುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Hassan ಕನ್ನಡ ವಿವಾದ: ತಮಿಳುನಾಡು ಜನತೆಗೆ ಸ್ಪೆಷಲ್ ಥ್ಯಾಂಕ್ಸ್ ಎಂದ ನಟ

Video Viral: RCB ವಿನ್‌ ಆಗುತ್ತಿದ್ದ ಹಾಗೇ ಮಗನ ವರ್ತನೆಯನ್ನು ವಿಡಿಯೋ ಮಾಡಿ ಹಂಚಿಕೊಂಡ ನಟ ಅಲ್ಲು ಅರ್ಜುನ್‌

Kamal Haasan: ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿದ್ದು ಯಾಕೆ: ರಂಜನಿ ರಾಘವನ್ ಸ್ಪಷ್ಟನೆ

Vaishnavi Gowda: ಮದುವೆ ಸಂಗೀತ್ ಕಾರ್ಯಕ್ರಮವನ್ನೂ ಮರೆತು ಆರ್ ಸಿಬಿ ಮ್ಯಾಚ್ ನೋಡಿದ ವೈಷ್ಣವಿ ಗೌಡ

Kamal Haasan: ಕಮಲ್ ಹಾಸನ್ ಗರ್ವಭಂಗ: ಥಗ್ ಲೈಫ್ ಸಿನಿಮಾಗೆ ಬಿಗ್ ಶಾಕ್

ಮುಂದಿನ ಸುದ್ದಿ
Show comments