Select Your Language

Notifications

webdunia
webdunia
webdunia
webdunia

ಅಮ್ಮ ಸುಮಲತಾರನ್ನು ಗೆಲ್ಲಿಸಿಕೊಟ್ಟ ಮಂಡ್ಯ ಜನತೆಗೆ ಸ್ಪೆಷಲ್ಲಾಗಿ ವಿಡಿಯೋ ಸಂದೇಶ ನೀಡಿದ ದರ್ಶನ್

ಸುಮಲತಾ ಅಂಬರೀಶ್
ಮಂಡ್ಯ , ಶುಕ್ರವಾರ, 24 ಮೇ 2019 (06:36 IST)

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆಗೆ ನಿಂತಾಗ ಅವರ ಬೆನ್ನ ಹಿಂದೆಯೇ ಇದ್ದು, ಪ್ರಚಾರದಲ್ಲಿ ಶ್ರಮಿಸಿದವರು ಚಾಲೆಂಜಿಂಗ್ ಸ್ಟಾರ್ ದರ್ಶನ್.

ಇದೀಗ ಸುಮಲತಾ ಗೆಲುವಿನ ಬಳಿಕ ಡಿ ಬಾಸ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ವಿಡಿಯೋ ಸಂದೇಶ ನೀಡಿ ಧನ್ಯವಾದ ಸಲ್ಲಿಸಿದ್ದಾರೆ.

 

‘ಮಂಡ್ಯ ಜನತೆ ಅದರಲ್ಲೂ ಇಲ್ಲಿ ಬರುವ ಎಲ್ಲಾ ಹಳ್ಳಿ ಹಳ್ಳಿಯ ಜನರಿಗೂ ನನ್ನ ಸಾಷ್ಟಾಂಗ ನಮಸ್ಕಾರ. ನಮ್ಮ ಸಣ್ಣ ಅಳಿಲು ಸೇವೆಯನ್ನು ಪರಿಗಣಿಸಿ ಅಮ್ಮನಿಗೆ ದೊಡ್ಡ ಗೆಲುವು ಕೊಡಿಸಿದ್ದೀರ. ನಿಮ್ಮ ಪ್ರೀತಿಗೆ ಪದಗಳೇ ಸಾಲದು. ನೀವು ಕೊಟ್ಟಿರುವ ಗೆಲುವನ್ನು ಅಮ್ಮ ಖಂಡಿತಾ ಜೋಪಾನವಾಗಿ ಕಾಪಾಡುತ್ತಾರೆ. ಅವರ ಕೈಲಾದದ್ದನ್ನು ಐದು ವರ್ಷದಲ್ಲಿ ಮಾಡೇ ಮಾಡ್ತಾರೆ. ನೀವೆಲ್ಲರೂ ನಮ್ಮ ಪಾಲಿಗೆ ದೇವರಾಗಿದ್ದಾರೆ. ಪ್ರತಿಯೊಬ್ಬರಿಗೂ ತುಂಬಾ ತುಂಬಾ ಧನ್ಯವಾದಗಳು’ ಎಂದು ದರ್ಶನ್ ಕೈ ಮುಗಿದು ಧನ್ಯವಾದ ಸಲ್ಲಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 


Share this Story:

Follow Webdunia kannada

ಮುಂದಿನ ಸುದ್ದಿ

ಟೆಕ್ಕಿಗಳ ಬದುಕಿನ ರೋಚಕ `ವೀಕೆಂಡ್’ ಕಥನ!