Webdunia - Bharat's app for daily news and videos

Install App

ನಮ್ಮ ಜಾಗದಲ್ಲಿ ನಾವ್ಯಾಕೆ ಹೆದರಬೇಕು? ಸಲಾರ್ ಗೆ ಟಾಂಗ್ ಕೊಟ್ಟ ದರ್ಶನ್

Webdunia
ಶುಕ್ರವಾರ, 15 ಡಿಸೆಂಬರ್ 2023 (11:11 IST)
Photo Courtesy: Twitter
ಬೆಂಗಳೂರು: ಕಾಟೇರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಗೆ ಟಾಂಗ್ ಕೊಟ್ಟಿದ್ದಾರೆ.

ಕಾಟೇರ ಸಿನಿಮಾ ತಂಡ ನಿನ್ನೆ ಸುದ್ದಿಗೋಷ್ಠಿ ನಡೆಸಿತ್ತು. ಈ ಸುದ್ದಿಗೋಷ್ಠಿಯಲ್ಲಿ ದರ್ಶನ್ ಹಾಗೂ ಇಡೀ ಚಿತ್ರತಂಡವೇ ಹಾಜರಿತ್ತು. ಈ ವೇಳೆ ತಮ್ಮ ಸಿನಿಮಾಗೆ ಪರಭಾಷಾ ಸಿನಿಮಾಗಳಾದ ಸಲಾರ್, ಡಂಕಿ ಪೈಪೋಟಿ ಬಗ್ಗೆ ದರ್ಶನ್ ಪರೋಕ್ಷ ಟಾಂಗ್ ಕೊಟ್ಟರು.

‘ನಾವು 29 ಕ್ಕೆ ಬರೋಣ ಅಂದುಕೊಂಡಿದ್ವಿ. ನಮ್ಮ ಸಿನಿಮಾ, ನಮ್ಮ ಜಾಗ ಇದು, ಯಾರಿಗೋ ಹೆದರಿಕೊಂಡು ನಾವು ಯಾಕೆ ಹೋಗಬೇಕು? ನಮ್ಮ ಜಾಗಕ್ಕೆ ಬರಲು ಅವರು ಹೆದರಬೇಕು. ನಾವ್ಯಾಕೆ ಹೆದರಬೇಕು? ಯಾಕೆಂದರೆ ಕನ್ನಡ ಜನಗಳಿದಾರಾ ಇಲ್ವೋ ಅಂತ ನನಗೇ ಡೌಟು ಬಂತು. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಕನ್ನಡ ಜನಗಳು ಖಂಡಿತಾ ನಮ್ಮ ಕೈ ಹಿಡೀತಾರೆ. ಯಾಕೆಂದರೆ ನಾವು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಅಪ್ಪಟ ಕನ್ನಡ ಸಿನಿಮಾವಿದು. ಕರ್ನಾಟಕ ಜನರಿಗೋಸ್ಕರ ಮಾಡಿದ ಸಿನಿಮಾವಿದು’ ಎಂದು ದರ್ಶನ್ ಹೇಳಿದ್ದಾರೆ.

ಸಲಾರ್ ಸಿನಿಮಾ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿರ್ಮಾಣದ ಸಿನಿಮಾ. ಹಾಗಿದ್ದರೂ ಈ ಸಿನಿಮಾದ ನಾಯಕರಿಂದ ಹಿಡಿದು ಬಹುತೇಕ ಪಾತ್ರವರ್ಗದವರು ತೆಲುಗು ಮೂಲದವರು. ಹೀಗಾಗಿ ಇದು ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಎಂದೇ ಪರಿಗಣಿತವಾಗಿದೆ. ಈ ಹಿನ್ನಲೆಯಲ್ಲಿ ದರ್ಶನ್ ಸಲಾರ್ ಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ಮೆಚ್ಚುಗೆ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ಮುಂದಿನ ಸುದ್ದಿ
Show comments