Publish Date: Mon, 28 Aug 2023 (08:30 IST)
Updated Date: Mon, 28 Aug 2023 (08:49 IST)
ಬೆಂಗಳೂರು: ಸುಮಲತಾ ಅಂಬರೀಶ್ ಬರ್ತ್ ಡೇ ಪಾರ್ಟಿಯಲ್ಲಿ ಒಂದು ಕಾಲದ ಗೆಳೆಯರಾಗಿದ್ದ ಕಿಚ್ಚ ಸುದೀಪ್-ದರ್ಶನ್ ಒಟ್ಟಿಗೇ ಕಾಣಿಸಿಕೊಂಡಿದ್ದು ಎಲ್ಲರ ಸಂತೋಷಕ್ಕೆ ಕಾರಣವಾಗಿತ್ತು.
ಈ ಇಬ್ಬರೂ ಸ್ಟಾರ್ ನಟರು ಮುನಿಸು ಮರೆತು ಒಂದಾಗಬೇಕೆಂದು ಎಲ್ಲರ ಒತ್ತಾಯವಾಗಿತ್ತು. ಅದೇ ರೀತಿ ಸುಮಲತಾ ಅಂಬರೀಶ್ ಪಾರ್ಟಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇಬ್ಬರನ್ನೂ ವೇದಿಕೆಯಲ್ಲಿ ನಿಲ್ಲಿಸಿದ್ದರು. ಆದರೆ ಪರಸ್ಪರ ಇಬ್ಬರೂ ಮಾತನಾಡುವ ಗೋಜಿಗೆ ಹೋಗಿರಲಿಲ್ಲ.
ಆದರೆ ಇದೆಲ್ಲಾ ಬೆಳವಣಿಗೆ ಬೆನ್ನಲ್ಲೇ ನಟ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಜೋಡೆತ್ತುಗಳೊಂದಿಗೆ ತಾವು ನಿಂತಿರುವ ಫೋಟೋ ಪ್ರಕಟಿಸಿ ಕಾಲಾಯ ತಸ್ಮೈ ನಮಃ ಎಂದು ಬರೆದುಕೊಂಡಿದ್ದು ಕಿಚ್ಚನ ಜೊತೆಗೆ ಕಾಂಪ್ರಮೈಸ್ ಮಾಡಿಕೊಂಡ ಸೂಚನೆ ಕೊಟ್ಟಿದ್ದಾರೆ ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ.