Webdunia - Bharat's app for daily news and videos

Install App

ಮಧ್ಯ ಬೆರಳು ತೋರಿದ್ಯಾಕೆ ಎಂದು ಪೊಲೀಸರ ಡ್ರಿಲ್: ದರ್ಶನ್ ಹೇಳಿದ್ದೇನು

Krishnaveni K
ಶುಕ್ರವಾರ, 13 ಸೆಪ್ಟಂಬರ್ 2024 (11:16 IST)
ಬಳ್ಳಾರಿ: ನಿನ್ನೆ ಮಾಧ್ಯಮಗಳ ಕ್ಯಾಮರಾ ಕಂಡೊಡನೆ ಮಧ್ಯ ಬೆರಳು ತೋರಿ ಅಸಭ್ಯ ವರ್ತನೆ ತೋರಿದ್ದ ದರ್ಶನ್ ಗೆ ಪೊಲೀಸರು ನಿನ್ನೆಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ದರ್ಶನ್ ಪ್ರತಿಕ್ರಿಯೆ ಏನಿತ್ತು ಎಂಬುದು ಈಗ ಬಹಿರಂಗವಾಗಿದೆ.

ನಟ ದರ್ಶನ್ ಗೆ ಮೊದಲಿನಿಂದಲೂ ಮಾಧ್ಯಮಗಳ ಮೇಲೆ ಸಿಟ್ಟಿದೆ. ಇದೀಗ ತಮ್ಮ ವಿರುದ್ಧ ಕೇಸ್ ವಿಚಾರವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ಅವರನ್ನು ಮತ್ತಷ್ಟು ತಲೆಕೆಡಿಸಿದೆ. ಇದೇ ಹತಾಶೆಯಿಂದಲೇ ನಿನ್ನೆ ಬಳ್ಳಾರಿ ಜೈಲಿನಲ್ಲಿ ವಕೀಲರ ಭೇಟಿಗೆ ವಿಸಿಟರ್ಸ್ ರೂಂಗೆ ಬರುವಾಗ ಮಾಧ್ಯಮಗಳ ಕ್ಯಾಮರಾ ಕಂಡೊಡನೆ ದರ್ಶನ್ ಅಸಭ್ಯ ಸನ್ನೆ ಮಾಡಿದ್ದಾರೆ.

ಅವರ ವಿಡಿಯೋಗಳು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿತ್ತು. ಹಲವರು ಕೆಟ್ಟ ಮೇಲೂ ಬುದ್ಧಿ ಬಂದಿಲ್ಲ ಎಂದು ದರ್ಶನ್ ರನ್ನು ಟೀಕೆ ಮಾಡಿದ್ದರು. ಇನ್ನು ಅವರ ಅಭಿಮಾನಿಗಳಂತೂ ಎಂದಿನಂತೇ ತಮ್ಮ ಬಾಸ್ ಮೀಡಿಯಾಗೆ ಸರಿಯಾಗಿಯೇ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು.

ಆದರೆ ಈ ವಿಚಾರ ವಿವಾದವಾಗುತ್ತಿದ್ದಂತೇ ನಿನ್ನೆ ಜೈಲಿನಲ್ಲಿ ಪೊಲೀಸರು ದರ್ಶನ್ ರನ್ನು ವಿಚಾರಣೆ ಮಾಡಿದ್ದಾರೆ. ಈ ಸನ್ನೆ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ದರ್ಶನ್, ನಾನು ಹಾಗೆ ಮಾಡಿಯೇ ಇಲ್ಲ. ಎಲ್ಲದಕ್ಕೂ ನೀವು ಯಾಕೆ ನನ್ನನ್ನು ತಪ್ಪು ತಿಳಿಯುತ್ತೀರಿ. ಅಷ್ಟಕ್ಕೂ ಮಾಧ್ಯಮಗಳು ಯಾಕೆ ಯಾವಾಗಲೂ ಜೈಲಿನ ಬಳಿ ಇರ್ತಾರೆ ಎಂದು ಪ್ರಶ್ನೆ ಮಾಡಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments