ನಿನ್ನೆ ಜೋಡೆತ್ತು ಫೋಟೋ, ಇಂದು ‘ಏಕಾಂಗಿ’ ಸಂದೇಶ ಬರೆದ ನಟ ದರ್ಶನ್

Webdunia
ಮಂಗಳವಾರ, 29 ಆಗಸ್ಟ್ 2023 (09:31 IST)
Photo Courtesy: Twitter
ಬೆಂಗಳೂರು: ಮಾಧ್ಯಮಗಳೊಂದಿಗೆ ಮುನಿಸಿಗೆ ತೆರೆ ಎಳೆದು, ಸುಮಲತಾ ಅಂಬರೀಶ್ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ಮೇಲೆ ನಟ ದರ್ಶನ್ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಫೋಟೋ ಭಾರೀ ಚರ್ಚೆಗೆ ಕಾರಣವಾಗಿದೆ.

ಸುಮಲತಾ ಪಾರ್ಟಿಯಲ್ಲಿ ಭಾಗವಹಿಸಿದ ತಕ್ಷಣವೇ ದರ್ಶನ್ ಜೋಡೆತ್ತುಗಳೊಂದಿಗಿನ ಫೋಟೋ ಪ್ರಕಟಿಸಿ, ಕಾಲಾಯ ತಸ್ಮೈ ನಮಃ ಎಂಬ ಸಂದೇಶ ಬರೆದಿದ್ದರು. ಈ ಮೂಲಕ ಕಿಚ್ಚನ ಜೊತೆಗಿನ ಮುನಿಸು ಮರೆತಿರುವುದನ್ನು ಪರೋಕ್ಷವಾಗಿ ಸುಳಿವು ನೀಡಿದ್ದಾರೆ ಎಂದು ಎಲ್ಲರೂ ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ‘ಏಕಾಂಗಿ’ ಸಂದೇಶ ಬರೆದು ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದಾರೆ.

ಏಕಾಂಗಿ ಸಿನಿಮಾದ ಬಿ ಅಲೋನ್, ಟು ಬಿ ಹ್ಯಾಪಿ, ಬಿ ಹ್ಯಾಪಿ ಟು ಬಿ ಅಲೋನ್ ಎಂದು ಬರೆದು ವಿತ್ ಮೈ ಸೆಲೆಬ್ರಿಟಿಸ್ ಎಂದು ಸಂದೇಶ ಬರೆದಿದ್ದಾರೆ. ದರ್ಶನ್ ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಸ್ ಎಂದು ಕರೆಯುತ್ತಾರೆ. ಇತ್ತೀಚೆಗೆ ದರ್ಶನ್ ಮಾಧ‍್ಯಮಗಳಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಿ ಸಂದೇಶ ಬರೆದಿದ್ದು ಅವರ ಕೆಲವು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ನೀವು ಯಾರ ಮುಂದೆಯೂ ಕೈ ಮುಗಿಯಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಬಹುಶಃ ತಾವು ಪ್ರೀತಿಸುವ ಅಭಿಮಾನಿಗಳಿಗೆ ದರ್ಶನ್ ಈ ಸಂದೇಶ ಬರೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ನಿರ್ಮಾಪಕ ಕೈಹಿಡಿದ ನಟಿ ಶರ್ಮಿಳಾ ಮಾಂಡ್ರೆ, ಹುಡುಗನ ಹಿನ್ನೆಲೆ ಇಲ್ಲಿದೆ

ಸಿಎಂ ಡಿಕೆ ಶಿವಕುಮಾರ್ ನೋಡಲು ಬಂದ ಹಿರಿಯ ನಟಿ ಪ್ರೇಮಾಗೆ ನೋ ಎಂಟ್ರಿ ಎಂದ ಭದ್ರತಾ ಸಿಬ್ಬಂದಿ Video

ಪತಿ, ಮಗ ಇಬ್ಬರೂ ಇಲ್ಲ, ಎಸ್ ಜಾನಕಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಇವರೇ

ನಾವೆಲ್ಲ ಜಾನಕಿ ಅಮ್ಮನವರ ಹಾಡಿನ ಶಿಷ್ಯರು: ಅಂತಿಮ ದರ್ಶನ ಪಡೆದು ವಿಜಯ ಪ್ರಕಾಶ್‌ ಭಾವುಕ

ಎಸ್‌ ಜಾನಕಿ ಧ್ವನಿಯಲ್ಲಿ ಪ್ರತಿಯೊಂದು ಭಾವನೆ ಎಲ್ಲರ ಮನೆ ತಲುಪುತಿತ್ತು: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮುಂದಿನ ಸುದ್ದಿ
Show comments