Select Your Language

Notifications

webdunia
webdunia
webdunia
webdunia

ರಜನಿಕಾಂತ್ ಅಳಿಯ ಧನುಷ್ ಡಿಎ‌ನ್‌ಎ ಪರೀಕ್ಷೆಗೆ ಕೋರ್ಟ್ ಸೂಚನೆ

ರಜನಿಕಾಂತ್ ಅಳಿಯ ಧನುಷ್ ಡಿಎ‌ನ್‌ಎ ಪರೀಕ್ಷೆಗೆ ಕೋರ್ಟ್ ಸೂಚನೆ
Chennai , ಶುಕ್ರವಾರ, 3 ಮಾರ್ಚ್ 2017 (11:04 IST)
ನಟ ಧನುಷ್ ತಮ್ಮ ಪುತ್ರನೆಂದು, ಶಾಲೆಗೆ ಹೋಗಿದ್ದಾಗ ನಡುವೆಯೇ ಓಡಿಹೋಗಿದ್ದ ಎಂದು ಕದಿರೇಶನ್ (65) ಎಂಬುವವರು ಹೇಳುತ್ತಿದ್ದಾರೆ. ಧನುಷ್ ತಮ್ಮ ಪುತ್ರ ಎಂದು ಅವರು ಕೋರ್ಟ್ ಮೆಟ್ಟಿಲೇರಿರುವುದು ಗೊತ್ತೇ ಇದೆ. ಇದೀಗ ಆತನ ಡಿಎನ್‍ಎ ಪರೀಕ್ಷೆ ಮಾಡುವಂತೆ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ಮತ್ತೊಂದು ಹೋರಾಟಕ್ಕೆ ಮುಂದಾಗಿದ್ದಾರೆ.
 
ನಮಗೆ ಮೂವರು ಮಕ್ಕಳಿದ್ದು ಅವರಲ್ಲಿ ಧನುಷ್ ಕೂಡ ಒಬ್ಬ ಎಂದು ಹೇಳಿದ ದಂಪತಿಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಧನುಷ್‌ಗೆ ಸಮನ್ಸ್ ಜಾರಿಗೊಳಿಸಿತ್ತು. ತಮಿಳು ಚಿತ್ರರಂಗದಲ್ಲಿ ಈಗಾಗಲೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಧನುಷ್‌ ಈ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾರೆ.
 
ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಈಗ ಡಿಎನ್‌ಎ ಪರೀಕ್ಷೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ಕದಿರೇಶನ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಡಿಎನ್ಎ ಪರೀಕ್ಷೆ ಮಾಡಿಸುವಂತೆ ಆದೇಶಿಸಿದೆ. ಪರೀಕ್ಷೆ ನಂತರ ಸತ್ಯ ಹೊರಬೀಳಲಿದ್ದು, ಧನುಷ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್‍ಲೈನ್‌ನಲ್ಲಿ ಸಂಪೂರ್ಣ ಲೀಕ್ ಆದ ’ರಂಗೂನ್’