ಕುತೂಹಲದ ಜ್ವರವೇರಿಸಿತು ಚೇಜ್ ಟೀಸರ್!

Webdunia
ಶುಕ್ರವಾರ, 22 ನವೆಂಬರ್ 2019 (19:58 IST)
ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ ಚೇಜ್. ಶೀರ್ಷಿಕೆಯಲ್ಲಿಯೇ ಒಂದು ಆವೇಗವನ್ನಿಟ್ಟುಕೊಂಡಿರೋ ಈ ಸಿನಿಮಾ ಥ್ರಿಲ್ಲರ್ ಅಂಶಗಳನ್ನೊಳಗೊಂಡಿದೆ ಎಂಬ ವಿಚಾರ ಇಯಾವತ್ತೋ ಪ್ರೇಕ್ಷಕರಿಗೆ ಸ್ಪಷ್ಟವಾಗಿತ್ತು. ಅಖಂಡ ಎರಡು ವರ್ಷಗಳ ಕಾಲ ರೂಪಿಸಲ್ಪಟ್ಟರೂ ಆರಂಭದಿಂದ ಈ ವರೆಗೂ ಈ ಸಿನಿಮಾದೆಡೆಗಿನ ಕುತೂಹಲ ಜ್ವರದಂತೆಯೇ ಏರಿಕೊಳ್ಳುತ್ತಿದೆ.
chase

ಇದೀಗ ಬಿಡುಗಡೆಯಾಗಿರೋ ಟೀಸರ್ ಅದನ್ನು ಮತ್ತಷ್ಟು ತೀವ್ರವಾಗಿಸುವಂತೆ ಮೂಡಿ ಬಂದಿದೆ. ಇದನ್ನು ಕಂಡು ಎಲ್ಲ ವರ್ಗದ ಪ್ರೇಕ್ಷಕರೂ ಥ್ರಿಲ್ ಆಗಿದ್ದಾರೆ. ಈ ಮೂಲಕ ಚೇಜ್ ಅನ್ನು ಆದಷ್ಟು ಬೇಗನೆ ಕಣ್ತುಂಬಿಕೊಳ್ಳಬೇಕೆಂಬ ತಹ ತಹ ಕೂಡಾ ತೀವ್ರವಾಗಿ ಬಿಟ್ಟಿದೆ.
 
ಸಿಂಪ್ಲಿ ಫನ್ ಮೀಡಿಯಾ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ವಿಲೋಕ್ ಶೆಟ್ಟಿಯವರ ಚೊಚ್ಚಲ ಪ್ರಯತ್ನ. ವಿಲೋಕ್ ಶೆಟ್ಟಿ ಸಾಹಿತ್ಯದತ್ತ ಬಹಳಷ್ಟು ಒಲವು ಹೊಂದಿಕೊಂಡೇ ಸಿನಿಮಾ ಧ್ಯಾನದಲ್ಲಿ ತಲ್ಲೀನವಾಗಿದ್ದ ಪ್ರತಿಭೆ. ಆ ಬಲದಿಂದಲೇ ಗಟ್ಟಿ ಕಥೆಯೊಂದನ್ನು ಸಿದ್ಧ ಪಡಿಸಿಕೊಂಡು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಕ್ರೈಂ ಥ್ರಿಲ್ಲರ್ ಸಸ್ಪೆನ್ಸ್ ಅಂಶಗಳನ್ನೊಳಗೊಂಡಿರೋ ಚಿತ್ರ. ಬೆಂಗಳೂರಿನಂಥಾ ನಗರಗಳಲ್ಲಿ ಮಹಿಳೆಯರು ರಾತ್ರಿ ಹೊತ್ತು ಒಂಟಿಯಾಗಿ ಓಡಾಡೋದು ಎಷ್ಟು ಸೇಫ್ ಎಂಬ ಸೂಕ್ಷ್ಮದಿಂದಲೇ ಬಿಚ್ಚಿಕೊಳ್ಳುವಂಥಾ ರೋಚಕ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಅದೆಷ್ಟು ರೋಚಕವಾಗಿದೆ ಅನ್ನೋದು ಇದೀಗ ಬಿಡುಗಡೆಯಾಗಿರೋ ಟೀಸರ್ ಮತ್ತು ಅದಕ್ಕೆ ಸಿಗುತ್ತಿರೋ ಅಭೂತಪೂರ್ವ ಪ್ರತಿಕ್ರಿಯೆಗಳೇ ಸಾಬೀತು ಮಾಡುತ್ತವೆ.
 
ವಿಲೋಕ್ ಶೆಟ್ಟಿ ಅಖಂಡ ಎರಡು ವರ್ಷಗಳ ಕಾಲ ಪರಿಶ್ರಮ ವಹಿಸಿ ರೂಪಿಸಿರೋ ಚಿತ್ರವಿದು. ಅದು ಈ ಟೀಸರ್ ಮೂಲಕ ಸಾರ್ಥಕಗೊಂಡಿದೆ. ಲಕ್ಷ ಲಕ್ಷ ವೀಕ್ಷಣೆ ಮತ್ತು ದಂಡಿ ದಂಡಿ ಸದಾಭಿಪ್ರಾಯಗಳೊಂದಿಗೆ ಅದೀಗ ವೈರಲ್ ಆಗಿ ಬಿಟ್ಟಿದೆ. ಇದರಲ್ಲಿನ ಚುರುಕುತನ, ಥ್ರಿಲ್ಲರ್ ಅಂಶಗಳು ಮತ್ತು ಬೆಚ್ಚಿ ಬೀಳಿಸುವಂಥಾ ಕ್ರೈಂ ಚಿತ್ರಣಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ ಶೀತಲ್ ಶೆಟ್ಟಿ, ರಾಜೇಶ್ ನಟರಂಗ, ಸುಶಾಂತ್ ಪೂಜಾರಿ ಮುಂತಾದವರು ಕೂಡಾ ವೈಶಿಷ್ಟ್ಯ ಪೂರ್ಣವಾದ ಪಾತ್ರಗಳಿಗೆ ಜೀವ ತುಂಬಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ವಿರುದ್ಧ ನನಗೆ ಧ್ವೇಷವಿಲ್ಲ, ಚಿನ್ನಯ್ಯನ ಅಪ್ಪಿಕೊಳ್ಳುತ್ತೇನೆ ಎಂದಿದ್ದು ನಿಜ: ಪ್ರಕಾಶ್ ರಾಜ್

ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡೋಣ, ಮಾರಿಕೊಂಡ ಮಾಧ್ಯಮಗಳಿಗೆ ಸ್ವಾಗತ ಎಂದ ಪ್ರಕಾಶ್ ರಾಜ್

ಬಾಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಆಗುತ್ತಿರುವಾಗಲೇ ಮತ್ತೇ ಸಂಕಷ್ಟ, ಕೋರ್ಟ್ ಮೆಟ್ಟಿಲೇರಿದ ದರ್ಶನ್ ಕುಟುಂಬ

ಕಲ್ಕಿಯಿಂದ ಹೊರನಡೆದ ದೀಪಿಕಾ ಸ್ಥಾನಕ್ಕೆ ಜೀವ ತುಂಬಲಿದ್ದಾರೆ, ಸೌತ್‌ ಇಂಡಿಯಾ ಬ್ಯೂಟಿ

ವಿವಾದ ನಡುವೆಯೂ ದುಬಾರಿ ಕಾರಿನ ಒಡೆಯನಾದ ನಟ ರಣವೀರ್ ಸಿಂಗ್

ಮುಂದಿನ ಸುದ್ದಿ
Show comments