Select Your Language

Notifications

webdunia
webdunia
webdunia
webdunia

ದರ್ಶನ್ ಗೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ!

ದರ್ಶನ್ ಗೂ ತಪ್ಪಲಿಲ್ಲ ಕಿಡಿಗೇಡಿಗಳ ಕಾಟ!
ಬೆಂಗಳೂರು , ಶನಿವಾರ, 30 ಸೆಪ್ಟಂಬರ್ 2017 (11:41 IST)
ಬೆಂಗಳೂರು: ನಿನ್ನೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ ಸಿನಿಮಾಗೂ ಪೈರಸಿ ಕಾಟ ಶುರುವಾಗಿದೆ. ನಿನ್ನೆ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನವಾಗುತ್ತಿರುವಂತೆ ಫೇಸ್ ಬುಕ್ ನಲ್ಲಿ ಲೈವ್ ಆಗಿ ಪ್ರಸಾರವಾಗಿದೆ.


ಮೊದಲ ದಿನವೇ ಪೈರಸಿ ಹಾವಳಿಯಾಗಿದ್ದು, ತೆರೆ ಕಂಡ ಮೊದಲ ದಿನವೇ ಫೇಸ್ ಬುಕ್ ನಲ್ಲಿ ಲೈವ್ ಆಗಿ ಪ್ರದರ್ಶನವಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಭರ್ಜರಿ, ಹೆಬ್ಬುಲಿ ಚಿತ್ರಗಳೂ ಇದೇ ಸಮಸ್ಯೆ ಎದುರಿಸಿತ್ತು. ಆಗಲೇ ನಟ ಜಗ್ಗೇಶ್ ಸೇರಿದಂತೆ ಚಿತ್ರರಂಗದ ಹಲವರು ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಬೇಡಿ ಎಂದು ಮನವಿ ಮಾಡಿದ್ದರು. ಹಾಗಿದ್ದರೂ ಕಿಡಿಗೇಡಿಗಳ ಕೃತ್ಯ ಮುಂದುವರಿದಿದೆ. ತಾರಕ್ ಸಿನಿಮಾ ನಿರ್ದೇಶಕ ಪ್ರಕಾಶ್ ಖಾಸಗಿ ವಾಹಿನಿಯಲ್ಲಿ ಮಾತನಾಡುತ್ತಾ ನಮ್ಮ ಪ್ರಯತ್ನಕ್ಕೆ ನೀರು ಸುರಿಯಬೇಡಿ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪದ್ಮಶ್ರೀ ವಿಜೇತ ಅಮೆರಿಕಾ ಮೂಲದ ನಟ ಟಾಮ್ ಆಲ್ಟರ್ ಇನ್ನಿಲ್ಲ!