Select Your Language

Notifications

webdunia
webdunia
webdunia
webdunia

‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂರ್ಖರಲ್ಲ ಎಂದುಕೊಂಡಿದ್ದೇನೆ’

‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂರ್ಖರಲ್ಲ ಎಂದುಕೊಂಡಿದ್ದೇನೆ’
ಬೆಂಗಳೂರು , ಗುರುವಾರ, 31 ಆಗಸ್ಟ್ 2017 (11:09 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಬಂದ ಬೆನ್ನಲ್ಲೇ ಬಿಜೆಪಿ ಶಾಸಕ ಸಿಟಿ ರವಿ ಪ್ರತಿಕ್ರಿಯಿಸಿದ್ದು, ದರ್ಶನ್ ಮೂರ್ಖರಲ್ಲ ಎಂದು ನಂಬಿದ್ದೇನೆ ಎಂದಿದ್ದಾರೆ.

 
‘ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈ ರಾಜ್ಯದ ಜನರ ಬೆಂಬಲ ಬಿಜೆಪಿಯೊಂದಿಗಿದೆ. ಹಾಗಾಗಿ ಮುಳುಗತ್ತಿರುವ ಹಡಗನ್ನು ಏರುವ ಮೂರ್ಖತನ ದರ್ಶನ್ ಮಾಡಲ್ಲ ಎಂಬ ನಂಬಿಕೆಯಿದೆ’ ಎಂದಿದ್ದಾರೆ.

ಬಿಜೆಪಿ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತರೇ ಸ್ಟಾರ್ ಗಳು. ಹಾಗಾಗಿ ಯಾವ ಸ್ಟಾರ್ ಗಳು ಯಾವ ಪಕ್ಷ ಸೇರಿದರೂ ನಮಗೆ ಸಮಸ್ಯೆಯಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶಾಸಕ ರವಿ ಉತ್ತರಿಸಿದ್ದಾರೆ. ದರ್ಶನ್ ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆದಿದೆ ಎಂಬ ಸುದ್ದಿ ದಟ್ಟವಾಗಿದ್ದು, ಇದನ್ನು ಸ್ವತಃ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ.. ರಾಜಕೀಯ ಸೇರ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್? ತೆರೆಮರೆ ನಡೆದಿದೆ ಭಾರೀ ಪ್ಲ್ಯಾನ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಸೇರ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್? ತೆರೆಮರೆ ನಡೆದಿದೆ ಭಾರೀ ಪ್ಲ್ಯಾನ್!