Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಗೆಳೆಯರಿಂದ ಉಪವಾಸ ಸತ್ಯಾಗ್ರಹ

ನಟ ಸುಶಾಂತ್ ಸಿಂಗ್ ಗೆಳೆಯರಿಂದ ಉಪವಾಸ ಸತ್ಯಾಗ್ರಹ
ಮುಂಬೈ , ಸೋಮವಾರ, 28 ಸೆಪ್ಟಂಬರ್ 2020 (13:24 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಆದರೆ ಸಿಬಿಐ ತನಿಖೆ ನಡೆಸುವುದರಲ್ಲಿ ವಿಳಂಬ ಮಾಡುತ್ತಿದೆ ಎಂದು ನಟನ ಸ್ನೇಹಿತರು ಆರೋಪ ಮಾಡಿದ್ದಾರೆ.

ಸಿಬಿಐ ನ ತನಿಖೆಯ ವಿಳಂಬದ ಬಗ್ಗೆ ವಿರೋಧಿಸಿ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಮತ್ತು ಮಾಜಿ ಸಿಬ್ಬಂದಿ ಗಾಂಧಿ ಜಯಂತಿ ಅಕ್ಟೋಬರ್ 2 ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ಸುಶಾಂತ್ ಸಿಂಗ್ ಸ್ನೇಹಿತ ಗಣೇಶ್ ಹಿವಾರ್ಕರ್ ಮತ್ತು ಮಾಜಿ ಸಿಬ್ಬಂದಿ ಅಂಕಿತ್ ಆಚಾರ್ಯ, ಶೀಘ್ರ ನ್ಯಾಯ ಕೋರಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗಡ್ಡದಾರಿಯಾಗಿದ್ದು ಇದೇ ಕಾರಣಕ್ಕೆ!