ಐ ಲವ್ ಯೂ ಅನ್ನಲು ಬಂದರು ಬ್ರಹ್ಮಾನಂದಂ!

Webdunia
ಗುರುವಾರ, 6 ಜೂನ್ 2019 (14:00 IST)
ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರಿಗೆ ವ್ಯಾಪಕವಾಗಿ ಅಭಿಮಾನಿ ಬಳಗವಿದೆ. ಕನ್ನಡದಲ್ಲಿಯೂ ಆ ಸಂಖ್ಯೆಗೇನೂ ಕಡಿಮೆಯಿಲ್ಲ. ಇದೀಗ ಕನ್ನಡ ಚಿತ್ರವೊಂದರಲ್ಲಿ ಮುಖ್ಯವಾದ ಪಾತ್ರದಲ್ಲಿಯೇ ಅವರನ್ನು ನೋಡೋ ಅವಕಾಶ ಕನ್ನಡದ ಪ್ರೇಕ್ಷಕರಿಗೆ ಕೂಡಿ ಬಂದಿದೆ. ಯಾಕಂದ್ರೆ ಇದೇ ತಿಂಗಳ 14ರಂದು ಬಿಡುಗಡೆಯಾಗಲಿರೋ ಐ ಲವ್ ಯೂ ಚಿತ್ರದಲ್ಲಿ ಅವರು ನಟಿಸಿದ್ದಾರೆ.
ಐ ಲವ್ ಯೂ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ತೆಲುಗಿನಲ್ಲಿ ಹೇಳಿ ಕೇಳಿ ಬ್ರಹ್ಮಾನಂದಂ ಪ್ರಸಿದ್ಧರು. ಕನ್ನಡ ಪ್ರೇಕ್ಷಕರಿಗೂ ಅವರು ಪರಿಚಿತರೇ. ಹೀಗಿರೋದರಿಂದಲೇ ಬ್ರಹ್ಮಾನಂದಂ ಅವರಿಗೊಂದು ಪಾತ್ರ ಸೃಷ್ಟಿಸಿದ್ದಾರೆ. ಅದು ಎಲ್ಲರೂ ಅಂದುಕೊಂಳ್ಳುವಂತೆಯೇ ಕಾಮಿಡಿ ಪಾತ್ರ. ಆದರೆ, ಯಾರೂ ಊಹಿಸಲಾಗದಂಥಾ ಮಜಲುಗಳು ಅದಕ್ಕಿದೆಯಂತೆ.
ಬ್ರಹ್ಮಾನಂದಂ ಇಲ್ಲಿ ನಾಯಕ ಮತ್ತು ನಾಯಕಿಯ ಸಂಬಂಧ ಕುದುರಿಸೋ ಹಾಸ್ಯಮಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಆ ಪಾತ್ರ ಇಡೀ ಕಥೆಯ ಬಹುಮುಖ್ಯ ಬಿಂದುವಿನಂಥಾದ್ದು. ಚಿತ್ರದ ಪ್ರಮುಖ ಘಟ್ಟಗಳಲ್ಲಿ ಈ ಪಾತ್ರ ನಿರ್ಣಾಯಕವಾಗಿ ನಡೆದುಕೊಳ್ಳುತ್ತೆ ಮತ್ತು ಚಿತ್ರದುದ್ದಕ್ಕೂ ಅದರ ಹಾಜರಿ ಇರುತ್ತದೆ. ಈ ಲವ್ ಯೂ ಚಿತ್ರದ ಮುಖ್ಯ ಸೆಳೆತಗಳಲ್ಲಿ ಬ್ರಹ್ಮಾನಂದಂ ನಟಿಸಿರೋ ಪಾತ್ರವೂ ಸೇರಿಕೊಂಡಿದೆ.
ಬ್ರಹ್ಮಾನಂದಂ ಅವರು ಆರ್ ಚಂದ್ರು ಕಥೆ ಹೇಳಿದಾಕ್ಷಣವೇ ಇಂಪ್ರೆಸ್ ಆಗಿದ್ದರಂತೆ. ಅವರ ಪಾತ್ರದ ಬಗ್ಗೆಯಂತೂ ಮೆಚ್ಚುಗೆ ಸೂಚಿಸಿದ್ದರಂತೆ.

ಅದೇ ಉತ್ಸಾಹದಿಂದ ಚಿತ್ರೀಕರಣ ಮುಗಿಸಿಕೊಂಡಿದ್ದ ಬ್ರಹ್ಮಾನಂದಂ ಈ ಚಿತ್ರದ ಬಗ್ಗೆ ತುಂಬಾನೇ ಭರವಸೆ ಇಟ್ಟುಕೊಂಡಿದ್ದಾರೆ. ಈ ತಿಂಗಳ ಹದಿನಾಲಕ್ಕನೇ ತಾರೀಕಿನಂದು ಬ್ರಹ್ಮಾನಂದಂ ಪಾತ್ರವೂ ಸೇರಿದಂತೆ ಐ ಲವ್ ಯೂ ಚಿತ್ರದ ಎಲ್ಲ ನಿಗೂಢಗಳೂ ಬಯಲಾಗಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments