ಬ್ರಹ್ಮಚಾರಿಯ ಕಥೆಯ ಸೂತ್ರಧಾರಿ ಉದಯ್ ಮೆಹ್ತಾ!

Webdunia
ಗುರುವಾರ, 28 ನವೆಂಬರ್ 2019 (14:29 IST)
ವ್ಯವಹಾರ, ವ್ಯಾಪಾರಗಳನ್ನು ಮೀರಿಕೊಂಡು ಸಿನಿಮಾವನ್ನು ಪ್ರೀತಿಸುವ, ಆರಾಧಿಸುವ ನಿರ್ಮಾಪಕರ ಸಂಖ್ಯೆ ಕಡಿಮೆಯಿದೆ. ಅಂಥಾ ಸದಭಿರುಚಿಯ ನಿರ್ಮಾಪಕರ ಸಾಲಿನಲ್ಲಿ ಉದಯ್ ಕೆ ಮೆಹ್ತಾ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಸಿನಿಮಾ ನಿರ್ಮಾಣಕ್ಕಿಳಿದರೆ ಕಾಸು ಹೂಡಿ ಸುಮ್ಮನೆ ಕೂತುಕೊಳ್ಳೋದು ಉದಯ್ ಮೆಹ್ತಾರ ಜಾಯಮಾನವಲ್ಲ.

ಅವರು ಪ್ರತೀ ಸನ್ನಿವೇಷ, ಪಲ್ಲಟಗಳನ್ನೂ ಜೊತೆಗಿದ್ದೇ ಗಮನಿಸುತ್ತಾರೆ. ಯಶಸ್ವೀ ಸಿನಿಮಾದ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರುವ ಮೆಹ್ತಾ, ಕಥೆಯ ಆಯ್ಕೆಯಲ್ಲಿಯೂ ಭಿನ್ನ ಅಭಿರುಚಿ ಹೊಂದಿರುವವರು.
ಬ್ರಹ್ಮಚಾರಿ ಚಿತ್ರದ ಒಂದೆಳೆಯನ್ನು ಆರಂಭಿಕವಾಗಿ ನಿರ್ದೇಶಕರಿಗೆ ಹೇಳಿದ್ದದ್ದೂ ಸಹ ಉದಯ್ ಮೆಹ್ತಾ ಅವರೇ ಅಂತೆ. ಹಾಗೆ ಸಿಕ್ಕ ಕಥಾ ಎಳೆಯನ್ನು ಹಾಸ್ಯಪ್ರಧಾನವಾಗಿ ನಿರ್ದೇಶಕ ಚಂದ್ರಮೋಹನ್ ವಿಸ್ತರಿಸಿದ್ದ ರೀತಿ ಕಂಡು ಉದಯ್ ಅವರೇ ಖುಷಿಗೊಂಡಿದ್ದರಂತೆ. ಚಂದ್ರಮೋಹನ್ ಅವರಿಗೂ ಒಂದು ಕಥೆಯನ್ನು ಸಂಪೂರ್ಣವಾಗಿ ಹಾಸ್ಯದ ಧಾಟಿಯಲ್ಲಿ ಪ್ರೇಕ್ಷಕರತ್ತ ದಾಟಿಸುವ ಕಲೆ ಸಿದ್ಧಿಸಿದೆ. ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಎಂಜಿನ್ ಸಿನಿಮಾಗಳ ಮೂಲಕ ಅವರು ಈ ಧಾಟಿಯಲ್ಲಿಯೇ ಗೆದ್ದಿದ್ದಾರೆ. ಆದರೆ ಖುದ್ದು ಅವರೇ ಬ್ರಹ್ಮಚಾರಿ ತಮ್ಮ ವೃತ್ತಿ ಬದುಕಿನ ಮಹತ್ತರ ಚಿತ್ರವಾಗಲಿದೆ ಎಂಬ ಭರವಸೆ ಹೊಂದಿದ್ದಾರೆ.
ಬ್ರಹ್ಮಚಾರಿ ಫ್ಯಾಮಿಲಿ ಪ್ಯಾಕೇಜಿನಂಥಾ ಚಿತ್ರ. ಟ್ರೇಲರ್ ಮತ್ತು ಟೀಸರ್ಗಳಲ್ಲಿನ ದೃಷ್ಯಾವಳಿಗಳನ್ನು ನೋಡಿ ಇದು ಡಬಲ್ ಮೀನಿಂಗ್ ಡೈಲಾಗುಗಳನ್ನು ಹೊಂದಿರೋ ಚಿತ್ರ ಅಂದುಕೊಳ್ಳಬೇಕಿಲ್ಲ. ಒಂದೇ ಒಂದು ಸೀನಿನಲ್ಲಿಯೂ ವಲ್ಗರ್ ಅನ್ನಿಸದಂತೆ ಹಾಸ್ಯಕ್ಕೆ ಬದ್ಧವಾಗಿ ಈ ಚಿತ್ರವನ್ನು ರೂಪಿಸಲಾಗಿದೆ. ಕುಟುಂಬ ಸಮೇತರಾಗಿ ಕೂತು ನೋಡಿ ಭಜರ್ಧರಿ ಮನರಂಜನೆ ಪಡೆಯುವಂತೆ ಬ್ರಹ್ಮಚಾರಿ ಚಿತ್ರ ರೂಪುಗೊಂಡಿದೆ. ಈಗಾಗಲೇ ಯಾವ್ಯಾವ ರೀತಿಯಲ್ಲಿ ಈ ಸಿನಿಮಾದತ್ತ ಕ್ರೇಜ್ ಸೃಷ್ಟಿಯಾಗಿದೆಯೋ ಅದನ್ನೂ ಮೀರಿಸುವಂಥಾ ಗಟ್ಟಿ ಕಂಟೆಂಟಿನೊಂದಿಗೆ ಬ್ರಹ್ಮಚಾರಿ ಲಕ ಲಕಿಸಿದ್ದಾನೆ. ಅದರ ಅಸಲೀ ಸ್ವರೂಪ ಈ ವಾರ ಎಲ್ಲರೆದುರು ಅನಾವರಣಗೊಳ್ಳಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಮುಂದಿನ ಸುದ್ದಿ
Show comments