Webdunia - Bharat's app for daily news and videos

Install App

ಬಾಲಿವುಡ್ ಮಂದಿಗೆ ಈಗ ಸ್ಯಾಂಡಲ್ ವುಡ್ ಭಯ

Webdunia
ಸೋಮವಾರ, 29 ನವೆಂಬರ್ 2021 (12:16 IST)
ಬೆಂಗಳೂರು: ಒಂದು ಕಾಲವಿತ್ತು. ಸಿನಿಮಾ ಎಂದರೆ ಬಾಲಿವುಡ್ ಎನ್ನುವ ಮಟ್ಟಿಗೆ ಹಿಂದಿ ಚಿತ್ರರಂಗದ ಪ್ರಭಾವವಿತ್ತು. ಆದರೆ ಈಗ ಬಾಲಿವುಡ್ ಸೌತ್ ಸಿನಿಮಾಗಳತ್ತ ನೋಡುವ ರೀತಿ ನಮ್ಮ ಚಿತ್ರರಂಗ ಬೆಳೆದಿದೆ.

ಅದರಲ್ಲೂ ಕೆಜಿಎಫ್ ಸಿನಿಮಾ ಬಳಿಕ ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತಾರವಾಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆಯವರೂ ತಿರುಗಿ ನೋಡುವಂತೆ ಆಗಿದೆ ಎಂದರೆ ತಪ್ಪಾಗಲಾರದು. ಮೊದಲೆಲ್ಲಾ ಹಿಂದಿ ಸಿನಿಮಾಗಳ ಎದುರು ಸ್ಯಾಂಡಲ್ ವುಡ್ ಸಿನಿಮಾಗಳು ಎದ್ದು ನಿಲ್ಲುವುದೂ ಕನಸಿನ ಮಾತಾಗಿತ್ತು. ಆದರೆ ಈಗ ಅದೇ ಬಾಲಿವುಡ್ ಮಂದಿ ಕನ್ನಡ ಸಿನಿಮಾದ ರಿಲೀಸ್ ಡೇಟ್ ನೋಡಿಕೊಂಡು ತಮ್ಮ ಸಿನಿಮಾ ರಿಲೀಸ್ ಮಾಡುವ ಹಂತಕ್ಕೆ ಬಂದಿದೆ.

ಕೆಜಿಎಫ್ 2 ಸಿನಿಮಾ ಬಾಲಿವುಡ್ ನ ಅಮೀರ್ ಖಾನ್ ರಲ್ಲಿ ಭಯ ಹುಟ್ಟಿಸಿದ್ದರೆ, ಕನ್ನಡದ ಮದಗಜ ಸಿನಿಮಾ ಹಿಂದಿಗೆ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಮೊನ್ನೆ ಬಿಡುಗಡೆಯಾದ ಗರುಡಗಮನ ವೃಷಭ ವಾಹನ ಎನ್ನುವ ಹೊಸ ಪ್ರಯೋಗದ ಸಿನಿಮಾವೊಂದು ಬಾಲಿವುಡ್ ಮಂದಿಯ ಗಮನ ಸೆಳೆದಿದೆ. ಲಾಕ್ ಡೌನ್, ಕೊರೋನಾ, ಡ್ರಗ್ ಪ್ರಕರಣಗಳಿಂದ ಬಾಲಿವುಡ್ ನಲುಗಿ ಹೋಗಿದ್ದರೆ, ಇತ್ತ ದಕ್ಷಿಣ ಭಾರತೀಯ ಸಿನಿಮಾ ರಂಗ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments