Select Your Language

Notifications

webdunia
webdunia
webdunia
webdunia

ವಿವಾದದಿಂದಾಗಿ ಕರ್ಣ ಸೀರಿಯಲ್ ನಿಂದ ಹೊರಬಂದರಾ ಭವ್ಯಾ ಗೌಡ

Bhavya Gowda

Krishnaveni K

ಬೆಂಗಳೂರು , ಮಂಗಳವಾರ, 17 ಜೂನ್ 2025 (08:46 IST)
Photo Credit: Instagram
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ಕರ್ಣ ಧಾರವಾಹಿ ಇದ್ದಕ್ಕಿದ್ದಂತೆ ಮುಂದೂಡಿಕೆಯಾಗಿದೆ. ಇದೀಗ ನಾಯಕಿ ಭವ್ಯಾ ಗೌಡ ಧಾರವಾಹಿಯಿಂದಲೇ ಹೊರ ಬಂದಿದ್ದಾರಾ ಎಂಬ ಊಹಾಪೋಹಗಳು ಎದ್ದಿವೆ. ಅಸಲಿ ಸತ್ಯವೇನು ಇಲ್ಲಿದೆ ನೋಡಿ.
 

ಭವ್ಯಾ ಗೌಡ ಈ ಮೊದಲು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದವರು. ಅದಾದ ಬಳಿಕ ಅವರು ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಬೇಕಿತ್ತು. ಆದರೆ ಆ ರಿಯಾಲಿಟಿ ಶೋನಿಂದ ಆರೋಗ್ಯದ ನೆಪದಲ್ಲಿ ಅವರು ಹೊರಬಂದಿದ್ದರು. ಆದರೆ ಆ ವಾಹಿನಿ ಜೊತೆಗಿನ ಒಪ್ಪಂದ ಇನ್ನೂ ಮುಗಿದಿಲ್ಲ.

ಇದರ ನಡುವೆ ಅವರು ಕರ್ಣ ಧಾರವಾಹಿಯ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ. ಅಷ್ಟೇ ಅಲ್ಲ ಧಾರವಾಹಿಯಲ್ಲಿ ಅವರು ನಟಿಸಿರುವ ಪ್ರೋಮೋಗಳೂ ಬಿಡುಗಡೆಯಾಗಿತ್ತು. ಆದರೆ ಈಗ ಆ ವಾಹಿನಿ ಭವ್ಯಾ ನಟಿಸಿರುವ ಧಾರವಾಹಿಗೆ ಸ್ಟೇ ತಂದಿದೆ. ಇದರಿಂದಾಗಿ ಕರ್ಣ ಧಾರವಾಹಿಯನ್ನು ಇದ್ದಕ್ಕಿದ್ದಂತೆ ಮುಂದೂಡಬೇಕಾಗಿ ಬಂತು.

ಈಗಾಗಲೇ ಭವ್ಯಾ ತಮ್ಮ ಸೋಷಿಯಲ್ ಮೀಡಿಯಾ ಪುಟದಿಂದ ಕರ್ಣ ಧಾರವಾಹಿಯ ಎಲ್ಲಾ ಪ್ರೋಮೋಗಳನ್ನೂ ಅಳಿಸಿ ಹಾಕಿದ್ದಾರೆ. ಹೀಗಾಗಿ ಭವ್ಯಾ ಧಾರವಾಹಿಯಿಂದ ಹೊರಬಂದರಾ ಎಂಬ ಅನುಮಾನ ಮೂಡಿತ್ತು. ಆದರೆ ಈ ನಡುವೆ ಅವರು ಪ್ರಕ್ರಿಯೆಯ ಮೇಲೆ ನಂಬಿಕೆಯಿಡಿ ಎಂದು ಸಂದೇಶವೊಂದನ್ನು ಬರೆದುಕೊಂಡಿದ್ದಾರೆ. ಹೀಗಾಗಿ ಅವರು ಇನ್ನೂ ಧಾರವಾಹಿಯಿಂದ ಹೊರಬಂದಿಲ್ಲ ಎನ್ನಲಾಗಿದೆ. ಹೊಸ ದಿನಾಂಕವನ್ನು ಜೀ ವಾಹಿನಿ ಇನ್ನಷ್ಟೇ ಪ್ರಕಟಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌