Select Your Language

Notifications

webdunia
webdunia
webdunia
webdunia

ಜಗ್ಗೇಶ್ ಪುತ್ರನಿಗೆ ಚಾಕು ಹಾಕಿದವನ ಬಗ್ಗೆ ಮಹತ್ವದ ಸುಳಿವು ಲಭ್ಯ

ಜಗ್ಗೇಶ್ ಪುತ್ರನಿಗೆ ಚಾಕು ಹಾಕಿದವನ ಬಗ್ಗೆ ಮಹತ್ವದ ಸುಳಿವು ಲಭ್ಯ
ಬೆಂಗಳೂರು , ಸೋಮವಾರ, 14 ಆಗಸ್ಟ್ 2017 (18:01 IST)
ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್`ಗೆ ಬೆಳಗ್ಗೆ ಚಾಕು ಇರಿದ ದುಷ್ಕರ್ಮಿಯ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಹೌದು, ಹಲ್ಲೆ ಮಾಡಿದ ಆರೋಪಿಯನ್ನ ಹೆಬ್ಬಾಳದ ಶಿವಶಂಕರ್ ಎಂದು ಗುರ್ತಿಸಲಾಗಿದೆ.

ಗುರುರಾಜ್ ಜಗ್ಗೇಶ ಬರೆದುಕೊಂಡಿದ್ದ ಕಾರಿನ ನಂಬರ್ ಮತ್ತು ಸಿಸಿಟಿವಿ ದೃಶ್ಯಾವಳಿ ಆಧರಿಸಿದ ಪೊಲೀಸರು ಹಲ್ಲೆಕೋರನ ಗುರುತು ಪತ್ತೆ ಹಚ್ಚಿದ್ದಾರೆ. ಸದ್ಯ, ಇದೇ ಕಾರ್ಯಾಚರಣೆಯಲ್ಲಿರುವ ಪೊಳಿಸರು ಸದ್ಯದಲ್ಲೇ ಆರೋಪಿಯನ್ನ ಬಂಧಿಸುವ ಸಾಧ್ಯತೆ ಇದೆ. ಈ ಮಧ್ಯೆ, ಹಲ್ಲೆಗೊಳಗಾದ ಗುರುರಾಜ್ ಜಗ್ಗೇಶ್ ತೊಡೆಭಾಗದಲ್ಲಿ 9 ಹೊಲಿಗೆ ಹಾಕಲಾಗಿದ್ದು, ಅಪಾಯದಿಂದ ಪಾರಾಗಿದ್ಧಾರೆ.

ಆರ್.ಟಿ.ನಗರದಲ್ಲಿ ಮಗನನ್ನ ಶಾಲೆಗೆ ಬಿಡಲು ಗುರುರಾಜ್ ಕಾರಿನಲ್ಲಿ ತೆರಳುತ್ತಿದ್ಧಾಗ ಸೀಕ್ ವೇಲ್ ಜಂಕ್ಷನ್ ಬಳಿ ಹಿಂಬದಿಯಿಂದ ಕಾರೊಮದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದರೂ ಕಾರು ನಿಲ್ಲಿಸದೇ ತೆರಳಿದ್ದರಿಂದ ಚೇಸ್ ಮಾಡಿದ ಗುರುರಾಜ್ ಸಿಗ್ನಲ್`ನಲ್ಲಿ ಅಡ್ಡಗಟ್ಟಿದ್ದಾರೆ. ಕಾರಿಗೆ ಗುದ್ದಿದ ಬಗ್ಗೆ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿದೆ. ಬಳಿಕ ಕಾರಿನಿಂದ ಡ್ಯಾಗರ್ ತೆಗೆದ ಆತ ಇರಿಯಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಗುರುರಾಜ್ ಎಗರಿದ್ದರಿಂದ ತೊಡೆಗೆ ಗಾಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಶೋನಲ್ಲಿ ಕನ್ನಡದಲ್ಲಿ ಮಾತನಾಡಿದ ಜೂನಿಯರ್ ಎನ್`ಟಿಆರ್