Webdunia - Bharat's app for daily news and videos

Install App

ಬಿಬಿಕೆ9: ಸಭ್ಯತೆ ಮೀರಿದ್ದಕ್ಕೆ ರೂಪೇಶ್-ಸಾನ್ಯಾಗೆ ಕಿಚ್ಚನ ಎಚ್ಚರಿಕೆ! ಕಣ್ಣೀರು ಹಾಕಿದ ರೂಪೇಶ್

Webdunia
ಭಾನುವಾರ, 16 ಅಕ್ಟೋಬರ್ 2022 (09:20 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್‍ ಮನೆಯಲ್ಲಿ ಲವ್ ಬರ್ಡ್ ಗಳಂತೆ ಸುತ್ತಾಡುತ್ತಿರುವ ರೂಪೇಶ್ ಶೆಟ್ಟಿ-ಸಾನ್ಯಾಗೆ ಕಿಚ್ಚ ಸುದೀಪ್ ನಿನ್ನೆಯ ಎಪಿಸೋಡ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕ್ಯಾಪ್ಟನ್ಸಿ ಅವಧಿ ಮುಗಿದ ಬಳಿಕವೂ ಮೊನ್ನೆಯ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ರೂಂನಲ್ಲಿದ್ದರು. ಅವರ ಜೊತೆಗೆ ರೂಪೇಶ್ ಮತ್ತು ಸಾನ್ಯಾ ಸಭ್ಯತೆ ಮೀರಿ ಮಲಗಿಕೊಂಡಿದ್ದರು. ಇದರ ಬಗ್ಗೆ ಸುದೀಪ್ ನಿನ್ನೆಯ ಎಪಿಸೋಡ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಕ್ಯಾಪ್ಟನ್ ಅವಧಿ ಮುಗಿದ ಮೇಲೂ ಅಲ್ಲಿರಲು ಅದು ಪಿಕ್ ನಿಕ್ ಸ್ಪಾಟ್ ಅಲ್ಲ ಎಂದು ಎಚ್ಚರಿಕೆ ನೀಡಿದರು. ಬಳಿಕ ಸಾನ್ಯಾ ಮತ್ತು ರೂಪೇಶ್ ವರ್ತನೆಯ ಸಭ್ಯತೆ ಮೇರೆಯಲ್ಲಿರಲಿಲ್ಲ. ಇದು ಅಂತಹ ವಿಚಾರಕ್ಕೆ ವೇದಿಕೆಯಲ್ಲ. ಇಲ್ಲಿಗೆ ಬಂದವರು ಎಷ್ಟೋ ಮಂದಿ ಪ್ರೇಮಿಗಳಾಗಿದ್ದಾರೆ, ಮನೆಯಿಂದ ಹೋದ ಮೇಲೆ ಮದುವೆಯಾಗಿದ್ದೂ ಇದೆ. ಆದರೆ ಇಲ್ಲಿ ಇರುವಾಗ ನಮ್ಮ ವರ್ತನೆ ನಮ್ಮ ನಿಯಂತ್ರಣದಲ್ಲಿರಬೇಕು ಎಂದರು.

ಇದರಿಂದ ಅವಮಾನಿತರಾದ ರೂಪೇಶ್ ಶೆಟ್ಟಿ, ನಮಗೆ ಆ ಉದ್ದೇಶವಿರಲಿಲ್ಲ. ನಾನು ತಪ್ಪು ಮಾಡಿದ್ದೇನೆ ಎಂದಾದರೆ ಬಿಗ್ ಬಾಸ್ ಮನೆಯಿಂದ ವಾಕ್ ಔಟ್ ಆಗಲೂ ಸಿದ್ಧ ಎಂದರು. ಆಗ ಸುದೀಪ್ ಮನೆಯಿಂದ ಹೊರಗೆ ಹೋಗುವುದು ನಿಮ್ಮ ನಿರ್ಧಾರವಲ್ಲ. ಜನ ಮೆಚ್ಚಿ ನಿಮ್ಮನ್ನು ಸೇಫ್ ಮಾಡಿದ್ದಾರೆ ಎಂದಾದರೆ ನಿಮಗೆ ಇನ್ನೊಂದು ಅವಕಾಶ ಕೊಟ್ಟಿದ್ದಾರೆ ಎಂದರ್ಥ. ಈ ವೇದಿಕೆಯನ್ನು ಸರಿಯಾಗಿ ಬಳಸಿಕೊಳ್ಳಿ. ನೀವಿಬ್ಬರು ಉತ್ತಮ ಸ್ಪರ್ಧಿಗಳು. ಆದರೆ ಅದನ್ನು ಇನ್ಯಾವುದೋ ವಿಚಾರಕ್ಕೆ ಹಾಳು ಮಾಡಿಕೊಳ್ಳಬೇಡಿ ಎಂದು ಖಡಕ್ ಆಗಿ ಹೇಳಿದ್ದಾರೆ. ಬಳಿಕ ರೂಪೇಶ್ ಗೆ ಒಂದು ನಿಮಿಷ ಯೋಚನೆ ಮಾಡಿ ಎಂದು ಸಮಯ ಕೊಟ್ಟರು. ಈ ವೇಳೆ ರೂಪೇಶ್ ಜೋರಾಗಿ ಅತ್ತುಬಿಟ್ಟರು. ನಾನು ಏನೂ ತಪ್ಪು ಮಾಡಿಲ್ಲ, ನನಗೆ ಆ ಉದ್ದೇಶವೂ ಇಲ್ಲ ಎಂದು ಕೂಗಾಡಿದರು. ಈ ವೇಳೆ ಮನೆಯ ಸದಸ್ಯರು ಸಮಾಧಾನ ಪಡಿಸಿದರು.


-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಮುಂದಿನ ಸುದ್ದಿ
Show comments