BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

Krishnaveni K
ಸೋಮವಾರ, 27 ಅಕ್ಟೋಬರ್ 2025 (13:35 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರ ಇಂದಿನ ಸಂಚಿಕೆಯಲ್ಲಿ ಜೋಡೆತ್ತು ಜಾನ್ವಿ ಮತ್ತು ಅಶ್ವಿನಿ ನಡುವೆಯೇ ವಾಗ್ಯುದ್ಧವಾಗುವ ಪ್ರೋಮೋ ಹರಿಯಬಿಡಲಾಗಿದೆ. ಇದನ್ನು ನೋಡಿ ನೆಟ್ಟಿಗರು ಕಿಚ್ಚ ಸುದೀಪ್ ಹೇಳಿದ್ರೂಂತ ಇಬ್ಬರೂ ಡ್ರಾಮಾ ಮಾಡ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಇದುವರೆಗೂ ಮನೆಯಲ್ಲಿ ಜಾನ್ವಿ ಸ್ವಂತಿಕೆ ಪ್ರದರ್ಶಿಸುತ್ತಿಲ್ಲ. ಕೇವಲ ಅಶ್ವಿನಿ ಗೌಡಗೆ ಪಿಆರ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ನೇರವಾಗಿ ಹೇಳಿದ್ದರು. ಮೊನ್ನೆಯ ಸಂಚಿಕೆಯಲ್ಲಿ ಹೀಗೆ ಹೇಳಿ ಜಾನ್ವಿ ಶೇಪ್ ಔಟ್ ಮಾಡಿದ್ದರು ಕಿಚ್ಚ.

ಇದರ ಪರಿಣಾಮವೋ ಏನೋ ಎಂಬಂತೆ ಈಗ ಜಾನ್ವಿ-ಅಶ್ವಿನಿ ಭಿನ್ನಾಭಿಪ್ರಾಯ ಹೊರಹಾಕಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಯಾಕೆ ಮನೆಯಲ್ಲಿರಬಾರದು ಎಂದು ಹೇಳಿ ಎಂದು ಬಿಗ್ ಬಾಸ್ ಟಾಸ್ಕ್ ಕೊಟ್ಟಿರುತ್ತದೆ. ಇದಕ್ಕೆ ಜಾನ್ವಿ ಫ್ರೆಂಡ್ ಶಿಪ್ ನಿಂದ ನನಗೆ ಕಳಂಕ ಬರುತ್ತಿದೆ ಎಂದು ಅಶ್ವಿನಿ ಹೇಳುತ್ತಾರೆ. ಇದು ಜಾನ್ವಿಯನ್ನು ಕೆರಳಿಸುತ್ತದೆ. ನಿಮ್ಮ ಆಟ ನೀವು ಆಡಿ ನನ್ನ ಆಟ ನಾನು ಆಡ್ತೀನಿ. ಕೆಲವರು ರೇಸ್ ನಲ್ಲಿ ಫಾಸ್ಟ್ ಆಗಿ ಹೋಗಬಹುದು. ಹಾಗಂತ ಸ್ಲೋ ಆಗಿ ಹೋಗುವವರು ಗುರಿ ತಲುಪಬಾರದು ಅಂತೇನಿಲ್ಲ ಎಂದು ತಿರುಗೇಟು ಕೊಡುತ್ತಾರೆ.

ಇದು ಅಶ್ವಿನಿಯನ್ನು ಕೆರಳಿಸುತ್ತದೆ. ಹಾಗಿದ್ದರೆ ಇಷ್ಟು ದಿನ ನನ್ನನ್ನು ಮುಂದೆ ಬಿಟ್ಟು ನೀವು ತಮಾಷೆ ನೋಡ್ತಿದ್ದಿರಿ. ಇಂತಹ ಫ್ರೆಂಡ್ ಶಿಪ್ ನನಗೆ ಬೇಡ ಎನ್ನುತ್ತಾರೆ. ಇಬ್ಬರ ನಡುವಿನ ಕಿತ್ತಾಟಕ್ಕೆ ಮನೆಯವರು ಮೂಕ ಸಾಕ್ಷಿಗಳಾಗಿರುತ್ತಾರೆ.

ಆದರೆ ಇಬ್ಬರ ಕಿತ್ತಾಟ ನೋಡಿ ನೆಟ್ಟಿಗರು ಇದೆಲ್ಲಾ ಕ್ಯಾಮರಾ ಮುಂದೆ ಇವರು ಆಡುತ್ತಿರುವ ನಾಟಕ ಎಂದಿದ್ದಾರೆ. ಜಾನ್ವಿಯನ್ನು ಅಶ್ವಿನಿಯ ಬಾಲ ಎನ್ನುತ್ತಿದ್ದಾರೆ. ಇದನ್ನು ತಪ್ಪಿಸಲು ಈಗ ಜಗಳವಾಡುವ ನಾಟಕವಾಡುತ್ತಿದ್ದಾರೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ

ಮುಂದಿನ ಸುದ್ದಿ
Show comments