Webdunia - Bharat's app for daily news and videos

Install App

ಟಾಸ್ಕ್ ಕಂಪ್ಲೀಟ್ ಮಾಡಲಾಗದೆ ಕಣ್ಣೀರಿಟ್ಟ ಬಾರ್ಬಿ ಡಾಲ್, ಆಶಿತಾ

Webdunia
ಶುಕ್ರವಾರ, 20 ಅಕ್ಟೋಬರ್ 2017 (17:38 IST)
ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆ ಕಣ್ಣೀರಿನ ಕೋಡಿ ಹರಿಯಿತು. ಸ್ಪರ್ಧಿಗಳಿಗೆ ಬಿಗ್‌ಬಾಸ್‌ ನೀಡಿದ್ದ `ಬಾಹುಬಲ’ ಟಾಸ್ಕ್‌ ಮಾಡಲು ಆಗದೆ ಬಾರ್ಬಿ ಡಾಲ್‌ ನಿವೇದಿತಾ ಹಾಗೂ ಆಶಿತಾ ಅರ್ಧಕ್ಕೆ ಟಾಸ್ಕ್‌ ಬಿಟ್ರು.

`ಬಾಹುಬಲ’ ಟಾಸ್ಕ್‌ ಅನ್ವಯ ಎರಡೂ ತಂಡದಲ್ಲಿ ದೈಹಿಕವಾಗಿ ಬಲಶಾಲಿಯಲ್ಲದ ಸ್ಪರ್ಧಿಗಳನ್ನು ಆಯ್ಕೆ ಮಾಡಬೇಕಿತ್ತು. ಈ ಎಬ್ಬರೂ ಇತರೆ ಸ್ಪರ್ಧಿಗಳನ್ನು ಹಗ್ಗ ಕಟ್ಟಿದ ಟೈರ್‌ ಮೇಲೆ ಕೂರಿಸಿಕೊಂಡು ಗೆರೆ ಮುಟ್ಟಿಸಬೇಕಾಗಿತ್ತು. ತೇಜಸ್ವಿನಿ ತಂಡದಲ್ಲಿ ಆಶಿತಾ, ಸಿಹಿ ಕಹಿ ಚಂದ್ರು ತಂಡದಲ್ಲಿ ನಿವೇದಿತಾರನ್ನ ಆಯ್ಕೆ ಮಾಡಲಾಗಿತ್ತು. ಇಬ್ಬರೂ ಸಹ ಪ್ರತ್ಯೇಕವಾಗಿ ಒಬ್ಬೊಬ್ಬರನ್ನು ಟೈರ್‌ ಮೇಲೆ ಕೂರಿಸಿಕೊಂಡು ಎಳೆಯಲು ಪ್ರಾರಂಭಿಸಿದ್ರು. ಸತತ ಪ್ರಯತ್ನದ ನಡುವೆ ನಿವೇದಿತಾ ಒಬ್ಬರನ್ನು ಎಳೆದು ಟಾರ್ಗೆಟ್ ರೀಚ್ ಆದ್ರು. ಆದರೆ ಆಶಿತಾ ಮಾತ್ರ ತುಂಬಾ ಕಷ್ಟಪಟ್ಟರು. ಆಟ ಮುಂದುವರೆಸಿದಾಗ ನಿವೇದಿತಾ ಹಾಗೂ ಆಶಿತಾ ಕೈಗೆ ಗಾಯವಾಯಿತು. ನೋವು ತಡೆಯಲಾಗದೆ ಇಬ್ಬರೂ ಸ್ಪರ್ಧಿಗಳು ಕಣ್ಣೀರಿಟ್ಟರು.

ಮೊದಲ ವಾರವೇ ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಶಿಪ್ ಬೇಡ ಎಂದು ಅನುಪಮಾ ಕಣ್ಣೀರಿಟ್ಟರು. ಯಾವುದೇ ವಿಷಯಕ್ಕೂ ಮನೆಯ ಸದಸ್ಯರು ತನ್ನ ಮಾತುಕೇಳುತ್ತಿಲ್ಲ. ಏನೇ ಹೇಳಿದರೂ ವಾದ ಮಾಡುತ್ತಿದ್ದಾರೆ ಎಂದು ಅತ್ತರು. ಈ ವೇಳೆ ಸಿಹಿ-ಕಹಿ ಚಂದ್ರು ಸೇರಿದಂತೆ ಹಲವರು ಕ್ಯಾಪ್ಟನ್‌ ಅನುಪಮಾಗೆ ಸಮಾಧಾನ ಮಾಡಿ, ಧೈರ್ಯ ತುಂಬಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments