Webdunia - Bharat's app for daily news and videos

Install App

ಗಂಧದ ಗುಡಿ ಶೂಟಿಂಗ್ ಸ್ಪಾಟ್ ಹಠ ಮಾಡಿ ನನ್ನ ಕರೆಸಿಕೊಂಡಿದ್ದರು ಅಪ್ಪು: ಅಶ್ವಿನಿ ಪುನೀತ್

Webdunia
ಗುರುವಾರ, 27 ಅಕ್ಟೋಬರ್ 2022 (10:14 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಸಿನಿಮಾ ನಾಳೆ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಖಾಸಗಿ ವಾಹಿನಿಗಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.

ಪುನೀತ ಪರ್ವ ಅಭಿಮಾನಿಗಳಿಗೋಸ್ಕರ ಮಾಡಬೇಕು ಎನ್ನುವುದು ನಮ್ಮ ಕನಸಾಗಿತ್ತು. ಅದಕ್ಕೆ ಸರ್ಕಾರ, ನಮ್ಮ ಟೀಂ, ಕುಟುಂಬದವರು ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ ಎಂದು ಧನ್ಯವಾದ ಸಲ್ಲಿಸಿದ್ದಾರೆ.

ಇನ್ನು ಗಂಧದ ಗುಡಿ ಎನ್ನುವ ಟೈಟಲ್ ಇಡುವುದಕ್ಕೆ ಕಾರಣ, ಪುನೀತ್ ಗೆ ಈ ಟೈಟಲ್ ಮೇಲೆ ವಿಶೇಷ ಭಾವನೆಯಿತ್ತು. ಇದು ಅಪ್ಪಾಜಿ ಮತ್ತು ಶಿವಣ್ಣ ಈಗಾಗಲೇ ಈ ಟೈಟಲ್ ನಲ್ಲಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕತೆಯಿರಲಿಲ್ಲ. ಆದರೆ ಒಂದು ಪ್ರಯಾಣವಿದೆ ಎಂದು ಅಶ‍್ವಿನಿ ಹೇಳಿದ್ದಾರೆ.

-Edited by Rajesh Patil

ಇನ್ನು, ಈ ಶೂಟಿಂಗ್ ಕರ್ನಾಟಕದ ಬೇರೆ ಬೇರೆ ತಾಣಗಳಲ್ಲಿ ಶೂಟಿಂಗ್ ಆಗಿದೆ. ಅದರಲ್ಲೂ ಕಾಳಿ ನದಿ ಬಳಿ ಶೂಟಿಂಗ್ ಮಾಡುವಾಗ ನೀನು ಬರ್ಲೇ ಬೇಕು ಎಂದು ಕರೆಸಿಕೊಂಡಿದ್ದರು. ಅಲ್ಲಿ ಶೂಟಿಂಗ್ ಮಾಡುವಾಗ ಒಂದು ಫೋನ್ ಕರೆ ಮಾಡಲು ಬೆಟ್ಟ ಹತ್ತಬೇಕಾಯಿತು. ಆಗ ಇಲ್ಲಿ ನಾಳೆ ಬೆಳಿಗ್ಗೆ ನೀನು ಬರ್ಲೇ ಬೇಕು. ನನ್ನ ಜೊತೆ ಟ್ರೆಕ್ಕಿಂಗ್ ಮಾಡಬೇಕು. ಸರ್ಕಾರದಿಂದ ಪರ್ಮಿಷನ್ ಸಿಕ್ಕಿದೆ. ಕೊನೆಗೆ ನಾನು ಅಲ್ಲಿಗೆ ಹೋದೆ. ಅದು ಬೆಸ್ಟ್ ಟ್ರೆಕ್ಕಿಂಗ್ ಅನುಭವವಾಗಿತ್ತು. ಮತ್ತೆ ಅಲ್ಲಿಂದ ಪಾತುಗುಡಿ ಅಂತ ಒಂದು ಹಳ‍್ಳಿಗೆ ಹೋಗಿ ಊಟ ಮಾಡಿಕೊಂಡು ಬಂದ್ವಿ ಎಂದು ಅಶ್ವಿನಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments